ಈ ಸಾಲಿನಲ್ಲಿ 4 ಹೊಸ ಹಾಸ್ಟೆಲ್ ಗಳನ್ನು ನಿರ್ಮಿಸುವ ಗುರಿ ಇದೆ – ಕೆ.ಎಸ್.ಆನಂದ್

ಸುದ್ದಿಕಡೂರು : ನನ್ನ ಅಧಿಕಾರವಧಿಯಲ್ಲಿ ನಾಲ್ಕು ಹೊಸ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಾಣ ಮಾಡುವ ಗುರಿಹೊಂದಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ವಿಜಯಲಕ್ಷ್ಮೀ ನಗರದಲ್ಲಿ ಭಾನುವಾರ ಬಿಸಿಎಂ ಇಲಾಖೆಯ ಸುಮಾರು 1 ಕೋಟಿ ವೆಚ್ಚದ ಡಿ.ದೇವರಾಜ್ ಅರಸು ಭವನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ಸಾಲಿನಲ್ಲಿ ನಾಲ್ಕು ಹೊಸ ಹಾಸ್ಟೆಲ್ ಕಟ್ಟಡಗಳ ಮಂಜೂರಾತಿಗೆ ಸಂಬಂಧಿಸಿದಂತೆ ಸಚಿವರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಸಕಾರತಾತ್ಮಕ ಸ್ಪಂದನೆ ದೊರೆತಿದೆ. ಕ್ಷೇತ್ರದಲ್ಲಿನ ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ಉತ್ತೇಜಿಸುವ ನಿಟ್ಟಿನಲ್ಲಿ ವಸತಿ ನಿಲಯಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ , ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್‌, ಸೈಯಾದ್ ಯಾಸೀನ್, ಶ್ರೀಕಾಂತ್, ಜ್ಯೋತಿ ಆನಂದ್, ಬಿಸಿಎಂ ವಿಸ್ತಿರಣಾಧಿಕಾರಿ ಮಂಜುನಾಥ್, ನಿರ್ಮಿತಿ ಕೇಂದ್ರದ ಅಭಿಯಂತರ ಗಂಗಾಧರ್, ಪುರಸಭಾ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ನಿಲಯದ ಮೇಲ್ವಿಚಾರಕರಾದ ದೇವರಾಜ್, ಅನಿಲ್, ವಿಂದ್ಯಾ, ಮಮತಾ, ಕವಿತಾ, ಸರಸ್ವತಿ, ಪ್ರೇಮಾಕುಮಾರಿ ಹಾಗು ಇಲಾಖೆಯ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!