34300‌ ಕಿಮೀ ಕ್ರಯಿಸಲು ಸೈಕಲ್ ಯಾತ್ರೆಯೊಂದಿಗೆ ಕಡೂರಿಗೆ ಆಗಮಿಸಿದ ಪುನೀತ್‌ ಅಭಿಮಾನಿ ಮುತ್ತುಸೆಲ್ವನ್

ಸುದ್ದಿ ಕಡೂರು : ಸುಮಾರು 34300ಕಿಮೀ ಸೈಕಲ್ ಯಾತ್ರೆ ಕೈಗೊಂಡಿರುವ  ಪುನೀತ್ ರಾಜ್ ಕುಮಾರ್ ಅವರ  ಅಪ್ಪಟ ಅಭಿಮಾನಿ ಮುತ್ತುಸೆಲ್ವನ್ ಪಟ್ಟಣಕ್ಕೆ ಆಗಮಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮುತ್ತುಸೆಲ್ವನ್ ಅವರನ್ನು ಗೌರವಿಸಿದರು‌‌. ಈ ಸಂದರ್ಭದಲ್ಲಿ ಮಾತನಾಡಿದ ಸೆಲ್ವನ್ ಅವರು, ಪುನೀತ್ ಅವರ ಮಾನವೀಯತೆ,ಪರಿಸರ ಪ್ರೇಮ ಮತ್ತು ಅವರಲ್ಲಿದ್ದ ಪರೋಪಕಾರ ಗುಣ ಎಲ್ಲರಲ್ಲೂ ಮೂಡಬೇಕಿದೆ. ಮಾನವೀಯ ಗುಣಗಳ ಸಾಕಾರ ಮೂರ್ತಿಯಾಗಿದ್ದ ಪುನೀತ್ ಅವರ ನೆನಪಿನಲ್ಲಿ ಈ ಸೈಕಲ್ ಅಭಿಯಾನವನ್ನು ಮಾಡುತ್ತಿದ್ದೇನೆ. ಹೋದಕಡೆಯಲ್ಲೆಲ್ಲ ಜನರು, ಪುನೀತ್ ಅಭಿಮಾನಿಗಳು ಪ್ರೋತ್ಸಾಹಿಸುತ್ತಿದ್ದಾರೆ. ಬಹುಮುಖ್ಯವಾಗಿ ಪೊಲೀಸ್ ಇಲಾಖೆ ನೀಡುತ್ತಿರುವ ಸಹಕಾರ ಬಹುದೊಡ್ಡದು ಎಂದು ತಿಳಿಸಿದರು.
ಪುನೀತ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಮತ್ತು ಪದಾಧಿಕಾರಿಗಳು ಇದ್ದರು.
 ತಮಿಳುನಾಡಿನ ಯುವಕ ಮುತ್ತುಸೆಲ್ವನ್‌ : 
“ಮೂಲತಃ ತಮಿಳುನಾಡಿನ ಕೊಯಮತ್ತೂರಿನವರಾದ ಯುವಕ ಮುತ್ತುಸೆಲ್ವನ್ ಎಂಬಿಎ ಪಧವೀಧರ. ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿ ಆ ಅಭಿಮಾನದಿಂದಲೇ ಭಾರತವೂ ಸೇರಿದಂತೆ ವಿಯೆಟ್ನಾಂ, ಬಾಂಗ್ಲಾದೇಶ, ನೇಪಾಳ ದೇಶಗಳಲ್ಲಿಯೂ ಈ ಸೈಕಲ್ ಯಾತ್ರೆ ನಡೆಯಲಿದೆ. ಒಟ್ಟು 34 300 ಕಿ.ಮೀ.ದೂರದ ಈ ಯಾತ್ರೆ ಈಗಾಗಲೇ19 ಸಾವಿರ ಕಿ.ಮೀ.ಕ್ರಮಿಸಿದೆ. ಹೋದ ಕಡೆಯಲ್ಲೆಲ್ಲ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ಥಳೀಯ ಜನರೊಡನೆ ಸೇರಿ 100 ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಹ ಈ ಯಾತ್ರೆಯ  ಉದ್ದೇಶವಾಗಿದೆ. ಸೈಕಲ್ ಯಾತ್ರೆಯ ನಡುವೆ ಕತ್ತಲಾದರೆ ಆ ಊರಿನ ಪೆಟ್ರೋಲ್ ಬಂಕ್ ಅಥವಾ ಬಸ್ ಸ್ಟಾಂಡ್ ನಲ್ಲಿ ಕಳೆದು ಮಾರನೇ ದಿನ‌ ಮತ್ತೆ ಹೊರಡುತ್ತಾರೆ. ತಮಿಳುನಾಡಿನವರಾದರೂ ಕನ್ನಡವನ್ನು ಶುದ್ಧವಾಗಿ ಮಾತನಾಡುತ್ತಿದ್ದ ಬಗ್ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು‌.”

Leave a Reply

Your email address will not be published. Required fields are marked *

error: Content is protected !!