ಸುದ್ದಿ ಕಡೂರು: ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಚಿಕ್ಕದೇವನೂರು ಬಳಿಯ ಕುರುಬರಹಳ್ಳಿಯಲ್ಲಿ ಸುಮಾರು 15 ಮನೆಗಳ ಹೆಂಚುಗಳು ಹಾರಿಹೋಗಿವೆ. ನೂರಾರು ತೆಂಗಿನಮರಗಳು ಬುಡ ಸಮೇತ ನೆಲಕಚ್ಚಿವೆ. ಗಾಳಿ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಗುರುವಾರ ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ.