ಲಾರಿಢಿಕ್ಕಿಗೆ ಬೈಕ್ ಸವಾರನ ಸಾವು

ಸುದ್ದಿ ಮೂಡಿಗೆರೆ : ಬೈಕಿಗೆ ತರಕಾರಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಿದರಹಳ್ಳಿಯ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಬಾಳೆಹಳ್ಳಿ ಗ್ರಾಮದ ಯುವಕ ಮಂಜುನಾಥ್ (30) ಮೃತ ದುರ್ದೈವಿಯಾಗಿದ್ದು, ತರಕಾರಿ ತುಂಬಿಕೊಂಡು ರಾ.ಹೆ.173ರ ಮೂಲಕ ಮಂಗಳೂರಿಗೆ ಹೋಗ್ತಿದ್ದ ಲಾರಿ ಬೈಕ್ ಸವಾರನಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ತಂದೆಯ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಮಂಜುನಾಥ್ ಸಾವನ್ನಪ್ಪಿದ್ದಾನೆ. ಅಪಘಾತ ನಡೆದ ರಭಸಕ್ಕೆ 1ಕಿಮೀ ವರೆಗೆ ಲಾರಿ ಮೃತ ವ್ಯಕ್ತಿಯನ್ನು ಎಳೆದೊಯ್ದುಕೊಂಡು ಹೋಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!