ಸುದ್ದಿ ಕಡೂರು : ಪಟ್ಟಣದ ಕೋರ್ಟ್ ರಸ್ತೆಯಲ್ಲಿರುವ ನ್ಯಾಯಗಣಪತಿ ದೇವಾಲಯದ ನೂತನ ವಿಮಾನ ಗೋಪುರದ ಕಲಶಾರೋಹಣ ಮತ್ತು ಅಷ್ಠಬಂಧ ಬ್ರಹ್ಮಕಲಶಾಭಿಷೇಶಕ ಮಹೋತ್ಸವದ ಧಾರ್ಮಿಕ ಸಮಾರಂಭವು ನ.18 ಮತ್ತು 19ರಂದು ನಡೆಯಲಿದೆ. ನ.18ರ ಶನಿವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ನವಗ್ರಹ ಹೋಮ, ಅಧಿವಾಸಪೂಜೆ, ಬೆಳಿಗ್ಗೆ 9ಗಂಟೆಗೆ ಶ್ರೀ ಗಣಪತಿ ದೇವರ ಪ್ರತಿಷ್ಠೆ ಅಷ್ಟಬಂಧ ಸಂಯೋಜನೆ ಜೀವಸ್ತಾಂಭ ಸೇಚನೆಪ್ರಾಣಾ ಜೀವವಾಹನ ಪ್ರಾಣನ್ಯಾಸ, ಶಿಖರ ಪ್ರತಿಷ್ಠೆ ಮಂಡಲ ರಂಚನೆ 108 ಅಷ್ಟೋತ್ತರ ಪಂಚಕಲಶ ಸಹಿತ ಬ್ರಹ್ಮ ಕಲಶ ಸ್ಥಾಪನೆ ಹಾಗೂ ಕಲಾತತ್ವ ಹೋಮ, ಬ್ರಹ್ಮ ಕುಂಭಾಭಿಷೇಕ ಮಹಾಪೂಜೆ
ನೆರವೇರಲಿದೆ. ನ.19ರ ಭಾನುವಾರ ಧಾರ್ಮಿಕ ಪೂಜಾ ಕೈಕಂರ್ಯಗಳು ನೆರವೇರಿಸಿ ನಂತರ ಮಧ್ಯಾಹ್ನ 12ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಯಳನಡು ಮಠದ ಶ್ರೀ ಜ್ಞಾನಪ್ರಭುಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಕೆ.ಎಸ್.ಆನಂದ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸೇರಿದಂತೆ ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದು ನ್ಯಾಯಗಣಪತಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಚ್. ತಿಪ್ಪೇಶ್ ತಿಳಿಸಿದ್ದಾರೆ.