ಸುದ್ದಿ ಕಡೂರು : ತಾಲ್ಲೂಕಿನ ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ದುಷ್ಕರ್ಮಿಯ ಮಹಿಳೆಯೊಬ್ಬರ 30ಗ್ರಾಂ ಚಿನ್ನದ ಸರ ಕಿತ್ತುಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಮನೆಯ ಮುಂದೆ ಜಗಲಿಯಲ್ಲಿ ಕುಳಿತಿರುವಾಗ ದುಷ್ಕರ್ಮಿ ವ್ಯಕ್ತಿ 2-3 ಬಾರಿ ಮನೆಯ ಮುಂದೆ ಓಡಾಡಿಕೊಂಡು ಇದ್ದವನು ಮಹಿಳೆಯ ಕೊರಳಿನಲ್ಲಿ ಇದ್ದ 30 ಗ್ರಾಂ ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದು ಬಂಗಾರದ ಸರದ ಬೆಲೆ ಸುಮಾರು 1ಲಕ್ಷ ಮೌಲ್ಯವಾಗಿದ್ದು, ಸರವನ್ನು ಕಿತ್ತುಕೊಂಡು ಹೋದ ಕಳ್ಳನನ್ನು ಪತ್ತೆ ಮಾಡಿ, ಕಳುವಾಗಿರುವ ಸರವನ್ನು ಪತ್ತೆ ಮಾಡಿಕೊಡುವಂತೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲಿಸ್ ರು ತನಿಖೆಯನ್ನು ಕೈಗೊಂಡಿದ್ದಾರೆ.