ಕೋಟೆಪಾತಾಳಾಂಜನೇಯ ಸ್ವಾಮಿ ದೇಗುಲದಲ್ಲಿ ರಾಮತಾರಕ ಹೋಮ

ಸುದ್ದಿ ಕಡೂರು : ಪಟ್ಟಣದ ಕೋಟೆಯ ಶ್ರೀ ಪಾತಾಳಾಂಜನೇಯ ಸ್ವಾಮಿ ದೇವಾಲಯದಲ್ಲಿ ಶನಿವಾರ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಆಗಮಿಕರಾದ ಸುಬ್ರಹ್ಮಣ್ಯಭಟ್ ಹಾಗೂ ದೇವಿಪ್ರಸಾದ್ ಸಂಗಡಿಗರಿಂದ ರಾಮತಾರಕ ಹೋಮ ನೆರವೇರಿಸಲಾಯಿತು. ಶುಕ್ರವಾರ ಸಂಜೆ ಗಣಪತಿಪೂಜೆ, ಕಳಸಸ್ಥಾಪನೆ, ಕಲಾಹೋಮ ಪೂಜಾಕೈಕಂರ್ಯಗಳು ನಡೆಸಲಾಯಿತು. ಬಂದಂತಹ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯ ವತಿಯಿಂದ ದಾಸೋಹದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮಿಗೆ ರಜತ ಅಲಂಕಾರ ಹಾಗೂ ಹೂವಿನ ಅಲಂಕಾರವನ್ನು ಸಮರ್ಪಿಸಲಾಯಿತು. ಸಂಜೆ ಭಜನಾ ಮಹಿಳಾ ಮಂಡಳಿಯ ವತಿಯಿಂದ ಭಜನಾ ಕೀರ್ತನೆಗಳು ನಡೆದವು. ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ್, ಪರಮೇಶ್, ಗೌತಮ್, ಬಸವರಾಜ್, ಗಂಟೆಕುಮಾರ್, ಭಾರತಿ, ಜಯಮ್ಮ, ಹುಲಿಕೆರೆಮಹೇಶ್, ಮನು ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!