ಕೋಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಧಾತ್ರಿಹೋಮ

ಸುದ್ದಿ ಕಡೂರು : ಪಟ್ಟಣದ ಕೋಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ಕೃತಿಕೋತ್ಸವ ಪೂಜಾ ಮಹೋತ್ಸವದ ಅಂಗವಾಗಿ ಧಾತ್ರಿಹೋಮ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ರಾಯರ ಮೃತ್ತಿಕಾ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ, ಬಳಿಕ ಪ್ರಧಾನ ಅರ್ಚಕರಾದ ಅಶ್ವಥ್‌ನಾರಾಯಣ್ ಆಚಾರ್ಯ ಜೋಷಿ ಅವರಿಂದ ಧಾತ್ರಿ ಹೋಮ ಕಾರ್ಯಕ್ರಮಗಳು ನೆರವೇರಿದವು. ಸಂಜೆ ಪ್ರಹ್ಲಾದರಾಜರ ಉತ್ಸವಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಭಜನೆ ಸೇರಿದಂತೆ ದೀಪೋತ್ಸವ ಕಾರ್ಯಕ್ರಮ ನಡೆಸಲಾಯಿತು. ಬಂತಹ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಶ್ರೀಮಠದ ವಿಶ್ವಸ್ಥ ಮಂಡಳಿ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಠದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಎಚ್.ಜೆ.  ಲಕ್ಷ್ಮೀ ನಾರಾಯಣ್‌ರಾವ್, ಕಾರ್ಯದರ್ಶಿ ಟಿ.ಆರ್.ಮನು, ಪದಾಧಿಕಾರಿಗಳಾದ ಟಿ.ಆರ್.ಪವನ್, ಕೃಷ್ಣಮೂರ್ತಿಜೋಷಿ, ವೆಂಕಟೇಶ್‌ಪದಕಿ, ಮಂಜುನಾಥ್ ಗೋಟಾ, ಟಿ.ಆರ್. ಸುರೇಶ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!