ಬೀರೂರು ಭಾಗದಿಂದ ಬಸ್‌ ಬಿಡಿ ಸರ್‌… ; ಕಡೂರು ವೈಎಸ್‌ಎಫ್‌ ಘಟಕ ಮನವಿ

ಸುದ್ದಿ ಕಡೂರು : ಬೀರೂರು ಸುತ್ತಮುತ್ತಲ ಗ್ರಾಮಾಂತರ ಭಾಗದಿಂದ ಕಡೂರು ಪಟ್ಟಣಕ್ಕೆ ಸಂಚರಿಸಲು ಹೆಚ್ಚುವರಿ ಬಸ್ ನಿಯೋಜಿಸಿ ಕೊಡುವಂತೆ ಸೋಮವಾರ ವೈಎಸ್‌ಎಫ್ ಯುವಜನ ವಿದ್ಯಾರ್ಥಿ ತಾಲ್ಲೂಕು ಒಕ್ಕೂಟದ ವತಿಯಿಂದ ಕಡೂರು ಸಾರಿಗೆ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ವೈಎಸ್‌ಎಫ್‌ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಅಜಯ್ ಮಾತನಾಡಿ, ಬೀರೂರು ಹೋಬಳಿಯ ಭಾಗದಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಡೂರು ಪಟ್ಟಣದ ಕಾಲೇಜಿಗೆ ನಿಗಧಿತ ಸಮಯಕ್ಕೆ ಆಗಮಿಸಲು ತಡವಾಗುತ್ತಿದ್ದು, ಬೀರೂರು ಬಸ್‌ನಿಲ್ದಾಣದಲ್ಲಿ ಬೆಳಿಗ್ಗೆ 7ರಿಂದ 10ಗಂಟೆಯವರೆಗೆ ಸುಮಾರು 400ಕ್ಕು ಅಧಿಕ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಇತರೆ ವೇಗದೂತ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಬಸ್ಸಿನ ಕಂಡಾಕ್ಟರ್‌ಗಳು ಹತ್ತಿಸಿಕೊಳ್ಳಲು ನಿರಾಕರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಯೋವೃದ್ದರ ಸುಖಕರ ಪ್ರಯಾಣಕ್ಕಾಗಿ ಕಡೂರು ಡಿಪೋದಿಂದ ಹೆಚ್ಚುವರಿ ಬಸ್ ನಿಯೋಜಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಶರತ್ ಬಿಳೇಕಲ್, ಗೌತಮ್, ಉಲ್ಲಾಸ್, ಕಿರಣ್, ದಿಲೀಪ್, ಬಿ.ಕೆ. ಪ್ರವೀಣ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!