ಸುದ್ದಿ ಕಡೂರು : ನಂಜುಡಪ್ಪ ವರದಿಯನ್ವಯ ತಾಲ್ಲೂಕು ಹಿಂದುಳಿದ ಪ್ರದೇಶವಾಗಿದ್ದು, ಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ 120 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸಿಕೊಡುವಂತೆ ಶಾಸಕ ಕೆ.ಎಸ್.ಆನಂದ್ ಸದನದಲ್ಲಿ ಒತ್ತಾಯಿಸಿದರು.
ಬೆಳಗಾವಿಯ ಅಧಿವೇಶನದಲ್ಲಿ ಸೋಮವಾರ ಕ್ಷೇತ್ರದ ರಸ್ತೆಗಳ ಅಭಿವೃದ್ದಿಗೆ ಅನುದಾನದ ಕೋರಿ ಪ್ರಸ್ತಾಪಿಸಿ ಮಾತನಾಡಿದ ಅವರು, ಕ್ಷೇತ್ರದ ರಸ್ತೆಗಳ ಸುಧಾರಣೆಯಾಗಬೇಕಿದೆ. ಸುಮಾರು 409 ಕಿ.ಮೀ ಜಿಲ್ಲಾ ಮುಖ್ಯರಸ್ತೆ ಹೊಂದಿದ್ದು, ಇದರಲ್ಲಿ ತುರ್ತಾಗಿ 48ಕಿಮೀ ರಸ್ತೆ ದುರಸ್ಥಿಯಾಗಬೇಕಿದೆ. ಅತ್ಯಂತ ಹಾಳಾಗಿರುವ ರಸ್ತೆಗಳನ್ನು ಸಮೀಕ್ಷೆ ಮಾಡಿಸಲಾಗಿದ್ದು, ರಸ್ತೆ ದುರಸ್ಥಿಗಾಗಿ ತುರ್ತಾಗಿ 80 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಬೇಕಿದೆ, ಜೊತೆಯಲ್ಲಿ ಕ್ಷೇತ್ರದಲ್ಲಿನ 106 ಕಿಮೀ ರಾಜ್ಯ ಹೆದ್ದಾರಿ ರಸ್ತೆ ಇದ್ದು, ಈಗಾಗಲೇ ಕಳೆದ 9 ವರ್ಷಗಳ ಹಿಂದೆ 40 ಕಿಮೀ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ನಡೆದಿದ್ದು, ಬಳಿಕ ಯಾವುದೇ ಅಭಿವೃದ್ದಿಗೊಂಡಿದೆ ಹಾಳಾಗಿದೆ. ಈ ಭಾಗದ ರಸ್ತೆಗಳ ಸುಧಾರಣೆಗಾಗಿ ಸಚಿವರು 40 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಬೇಕು. ಜಿಲ್ಲಾ ಮುಖ್ಯ ರಸ್ತೆಯನ್ನು 120 ಕಿಮೀ ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಬೇಕಿದೆ. 56 ಕಿಮೀ ಗ್ರಾಮೀಣ ರಸ್ತೆಯನ್ನು ಜಿಲ್ಲಾ ಮುಖ್ಯರಸ್ತೆಯಾಗಿ ಪರಿವರ್ತಿಸಬೇಕಿದೆ ಎಂದು ಸದನದಲ್ಲಿ ಪಿಡ್ಲೂö್ಯಡಿ ಸಚಿವರ ಬಳಿ ಮನವಿ ಮಾಡಿದರು. ಬಳಿಕ ಪಿಡ್ಲೂö್ಯಡಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಪ್ರತಿಕ್ರಿಯಿಸಿ ಮಾತನಾಡಿ, ಕ್ಷೇತ್ರದ ಶಾಸಕ ಆನಂದ್ ಬಳಿ ರಸ್ತೆ ಅಭಿವೃದ್ದಿಯ ಬಗ್ಗೆ ಚರ್ಚಿಸಲಾಗುವುದು. ಹಣದ ಲಭ್ಯತೆಯ ಮೇರೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.