ಸುದ್ದಿ ಕಡೂರು : ತಾಲ್ಲೂಕಿನ ಯಳ್ಳಂಬಳಸೆ ಸಮೀಪದಲ್ಲಿ ಮಂಗಳವಾರ ಸಂಜೆ ಚಿರತೆ ಧಾಳಿಯಿಂದಾಗಿ ಎರಡು ಮೇಕೆ ಮರಿಗಳು ಮೃತಪಟ್ಟಿವೆ. ಯಳ್ಳಂಬಳಸೆ ಗ್ರಾಮದ ಮಾದಾಪುರ ರಸ್ತೆ ಮಾರ್ಗದಲ್ಲಿ ಆಗಾಗ್ಗೆ ಚಿರತೆ ಕಾಣಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದು, ಕಳೆದ ವಾರದಲ್ಲಿ ಕುರಿ ಹಾಗೂ ಮೇಕೆಗಳ ಮೇಲೆ ಧಾಳಿ ನಡೆಸಿದೆ. ಕೆಲಸ ಕಾರ್ಯಗಳಿಗೆ ಓಡಾಡುವ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಚಿರತೆ ಸೆರೆಹಿಡಿಯಲು ಬೋನ್ ಇಡುವ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಿದೆ ಎಂದು ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷ ಸೈಯಾದ್ ಸಲೀಂ ಒತ್ತಾಯಿಸಿದರು.