ಬೈಕ್ ಗಳ ಕಳ್ಳತನ ಮಾಡಿದ್ದ ಅಪ್ರಪ್ತಾ ಬಾಲಕನನ್ನು ವಶಕ್ಕೆ ಪಡೆದ ಪಂಚನಹಳ್ಳಿ ಠಾಣೆ ಪೊಲೀಸರು

ಸುದ್ದಿ ಕಡೂರು :ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಬೈಕ್ ಕಳುವು ಮಾಡಿಕೊಂಡು ತಲೆಮರೆಸಿಕೊಂಡಿದ್ದ ಅಪ್ರಾಪ್ತಬಾಲಕನನ್ನು ಪಂಚನಹಳ್ಳಿ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಪತ್ತೆಹಚ್ಚಿ ಆರೋಪಿತ ಬಾಲಕನನ್ನು ವಿಚಾರಣೆಗೊಳಪಡಿಸಿ ಕಳ್ಳತನ ಮಾಡಿದ್ದ ಎರಡು ಯಮಹಾ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ನ.15ರಂದು ಹೊನ್ನೆನಹಳ್ಳಿ ಗ್ರಾಮದ ವಿಜಯೇಂದ್ರ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಪಂಚನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿಕೊಳ್ಳಲಾಗಿತ್ತು. ಬಳಿಕ ತನಿಖೆಯ ಕಾರ್ಯಚರಣೆ ಕೈಗೊಂಡ ಪಿಎಸೈ ಶಾಹಿದ್ ಅಪ್ರಿದ್ ನೇತೃತ್ವದ ತಂಡದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದರು.  ಪಿಎಸೈ ಲೀಲಾವತಿ, ಕೆ.ಕೆ.ಜಗಧೀಶ್, ಎಸ್.ಬಿ. ಸಿದ್ದನಾಯ್ಕ್,ಪ್ರವೀಣ್‌ಕುಮಾರ್, ಎಂ.ಎನ್.ನವೀನ್, ಬಿ.ಎಸ್.ನಿಂಗರಾಜಪ್ಪ ಮತ್ತಿತರಿದ್ದರು

 

Leave a Reply

Your email address will not be published. Required fields are marked *

error: Content is protected !!