ಕಡೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಚ್.‌ ರಾಜೇಶ್‌ ಆಯ್ಕೆ

ಸುದ್ದಿಕಡೂರು: ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ರಾಜೇಶ್ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ನ್ಯಾಯಾಲಯದ ಸಂಘದ ಕಚೇರಿ ಆವರಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕೆ.ಎಂ.ಜಯಣ್ಣ(ಗೌರವಾಧ್ಯಕ್ಷ), ಟಿ.ಗೋವಿಂದಸ್ವಾಮಿ(ಉಪಾಧ್ಯಕ್ಷ), ಡಿ.ಸಿ. ಸುನೀತಾ(ಪ್ರಧಾನಕಾರ್ಯದರ್ಶಿ), ಎಚ್.ವಿ.ಗಾಯತ್ರಿ(ಜಂಟಿಕಾರ್ಯದರ್ಶಿ), ಕೃಷ್ಣಕೀರ್ತಿ(ಕೀಡಾಕಾರ್ಯದರ್ಶಿ)ಗಳಾಗಿ ಆಯ್ಕೆಗೊಂಡಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿ, ಸುನೀತಾ ತಿಳಿಸಿದರು.
ಬಳಿಕ ನೂತನ ಅಧ್ಯಕ್ಷ ಎಚ್.ರಾಜೇಶ್ ಮಾತನಾಡಿ, ಹಿರಿಯರ ಮಾರ್ಗದರ್ಶನ ಮತ್ತು ಸಲಹೆ ಸಹಕಾರದೊಂದಿಗೆ ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎಚ್.ತಿಪ್ಪೇಶ್, ಹಿರಿಯ ವಕೀಲರಾದ ಬಿ.ಶಿವಕುಮಾರ್, ಎಂ.ಎಸ್.ಹೆಳವಾರ್, ಕೆ.ಎ.ಶಾಂತಪ್ಪ, ಎಸ್.ಎಸ್. ಅಜ್ಜಯ್ಯ, ಸಿ.ಜೆ.ಮಂಜುನಾಥ್, ಶಿವಶಂಕರಪ್ಪ, ಸಿ.ಎಂ.ಗAಗಣ್ಣ, ಸಿ.ಎಲ್. ದೇವರಾಜ್, ಕೆ.ಎನ್.ರಾಜಣ್ಣ, ಎಂ.ಎಚ್. ನಿರ್ಮಾಲ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!