ಸುದ್ದಿ ಕಡೂರು : ದತ್ತಜಯಂತಿಯ ಅಂಗವಾಗಿ ಪಟ್ಟಣದ ಬಿಜೆಪಿ ಕಚೇರಿಯಿಂದ ಮಾಜಿ ಶಾಸಕ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಸುಮಾರು 5 ಸಾವಿರಕ್ಕು ಅಧಿಕ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಮಂಗಳವಾರ ತೆರಳಿದರು.
ಬೆಳಿಗ್ಗೆ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಕಚೇರಿಯ ಬಳಿ ಆಗಮಿಸಿದ್ದ ದತ್ತಮಾಲಾಧಾರಿಗಳಿಗೆ ದತ್ತಪೀಠಕ್ಕೆ ತೆರಳುವ ಮುನ್ನ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು. ಬಳಿಕ 350ಕ್ಕು ಹೆಚ್ಚು ವಾಹನಗಳಲ್ಲಿ ತೆರಳಿದ ಭಕ್ತರನ್ನು ಬೀಳ್ಕೊಟ್ಟರು. ಬಳಿಕ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಸಹ ಅನುಸೂಯ ಜಯಂತಿ ಆಚರಣೆಗೆ ಕಡೂರಿನಿಂದ ದತ್ತಪೀಠಕ್ಕೆ ಸುಮಾರು 3 ಸಾವಿರ ಮಹಿಳೆಯರು ಸ್ವಯಂಪ್ರೇರಣೆಯಿದ ತೆರಳಿದ್ದರು, ಈ ಹಿನ್ನಲೆಯಲ್ಲಿ. ದತ್ತಜಯಂತಿಗೆ ಅತಿಹೆಚ್ಚು ಯುವಕರುಗಳು ಭಕ್ತಿಯಿಂದ ಮಾಲೆಧರಿಸಿ ಪ್ರತಿವರ್ಷಕ್ಕಿಂತ ಹೆಚ್ಚಿನ ಭಕ್ತರು ಪೀಠಕ್ಕೆ ತೆರಳಿ ದತ್ತಪಾದುಕೆಯ ದರ್ಶನ ಪಡೆಯಲು ಉತ್ಸಾಹದಿಂದ ತೆರಳಿದರು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಶಕ್ತಿಕೇಂದ್ರದ ಅಧ್ಯಕ್ಷರುಗಳಾದ ಬಳ್ಳೇಕೆರೆ ಶಶಿ, ಉಮೇಶ್, ಶಿವರಾಜ್, ಮಹೇಶ್, ಚಿನ್ನುದೇವರಾಜ್, ಮಂಜನಾಯ್ಕ್, ಕುರುಬಗೆರೆ ಮಹೇಶ್, ಟಿ.ಆರ್.ಲಕ್ಕಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಪಂಚನಹಳ್ಳಿ ರಂಗನಾಥ್, ಅಡಕೆ ಚಂದ್ರು, ಮಲ್ಲಿಕಾರ್ಜುನ್, ಸಿದ್ದಪ್ಪ, ಹುಲ್ಲೇಹಳ್ಳಿ ಲಕ್ಷ್ಮಣ್ ಜಿಗಣೇಹಳ್ಳಿ ಮಂಜು, ಕೆ.ಆರ್. ಚಂದ್ರು ಮತ್ತಿತರಿದ್ದರು.