ಸುದ್ದಿ ಕಡೂರು : ಕಂಠ ಪೂರ್ತಿ ಮದ್ಯಸೇವಿಸಿಕೊಂಡು ಮುದ್ದೆ ಊಟ ಮಾಡಿದ ತಂದೆ-ಮಗಳಿಬ್ಬರು ಸಾವನ್ಬಪ್ಪಿದ ಘಟನೆ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಪಟ್ಟಣಗೆರೆ ಗ್ರಾಮದ ದೊಡ್ಡಯಲ್ಲಪ್ಪ(75), ಯಲ್ಲಮ್ಮ(50) ಮೃತಪಟ್ಟ ದುರ್ದೈವಿಗಳು
ಕಳೆದ ಡಿ.31ರ ರಾತ್ರಿ ವಿಪರೀತ ಮದ್ಯಸೇವಿಸಿದ್ದಾರೆ ಎನ್ನಲಾಗಿದ್ದು, ಸೋಮವಾರ ಯಲ್ಲಮ್ಮ ತಯಾರಿಸಿದ ಮುದ್ದೆ ಊಟವನ್ನು ದೊಡ್ಡಯಲ್ಲಪ್ಪ ಮತ್ತು ಸಹೋದರ ಸಣ್ಣಯಲ್ಲಪ್ಪ ಹಾಗೂ ಮಗಳು ಯಲ್ಲಮ್ಮಜೊತೆಗೂಡಿ ಊಟ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ನಿಶ್ಯಕ್ತರಾಗಿದ್ದ ಮೂವರನ್ನು ಕುಟುಂಬಸ್ಥರು ಕಡೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದೊಡ್ಡಯಲ್ಲಪ್ಪ ಮತ್ತು ಮಗಳು ಯಲ್ಲಮ್ಮ ಮೃತಪಟ್ಟಿದ್ದು, ಮತ್ತೋರ್ವ ಸಹೋದರ ಸಣ್ಣಯಲ್ಲಪ್ಪ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮುದ್ದೆ ಊಟ ಮಾಡಿ ಸಾವನ್ನಪಿರುವ ಬಗ್ಗೆ ಹಲವು ಅನುಮಾನದ ಶಂಕೆ ವ್ಯಕ್ತಗೊಂಡಿದ್ದು, ಅಳಿದುಳಿದಿದ್ದ ಮುದ್ದೆಯ ಆಹಾರವನ್ನು ಅಲ್ಲಿದ್ದ ಕೋಳಿ ಮರಿಗಳು ಕೂಡ ಸೇವಿಸಿ ಮೃತಪಟ್ಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಫ್ ಎಸ್ ಐಎಲ್ ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪಿಎಸ್ಐ ಧನಂಜಯ್ ತಿಳಿಸಿದ್ದಾರೆ.