ಸ್ನೇಹಿತನ ಪತ್ನಿಯನ್ನೇ ಕೊಲೆ ಮಾಡಿದ ಭೂಪ; ನಾಗೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ

ಸುದ್ದಿ ಕಡೂರು : ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆಯು ಅತಿರೇಕಕ್ಕೆ ತಿರುಗಿ ಸ್ನೇಹಿತನ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ತಾಲ್ಲೂಕಿನ ನಾಗೇನಹಳ್ಳಿ ಅಗ್ರಹಾರ ತಾಂಡ್ಯದ ಗೌರಿಬಾಯಿ(50) ಹತ್ಯೆಗೀಡಾದ ಮಹಿಳೆ. ಬಾಣೂರಿನ ವಗ್ಗಯ್ಯ ಎಂಬಾತನು ಕೊಲೆ ಮಾಡಿದ ಆರೋಪಿ ತಲೆಮರೆಸಿಕೊಂಡಿದ್ದನು. ಬಳಿಕ ತನಿಖಾ ತಂಡವನ್ನು ರಚಿಸಿ ಭಾನುವಾರ ಸಂಜೆ ಸಖರಾಯಪಟ್ಟಣ ಪೊಲೀಸರು ಖಚಿತ ಮಾಹಿತಿಯೊಂದಿಗೆ ಬಂಧಿಸಿದ್ದಾರೆ.

ಅಗ್ರಹಾರ ತಾಂಡ್ಯದಲ್ಲಿನ ವಾಸಿ ಗೌರಿಬಾಯಿ ಪತಿಯ ಸ್ನೇಹಿತ ನಾಗಿದ್ದ ಆರೋಪಿ ವಗ್ಗಯ್ಯ ಕುಟುಂಬಕ್ಕೆ ಪರಿಚಯಿಸಿತ್ತನಾಗಿದ್ದನ್ನು ಪತಿ ತೀರಿಕೊಂಡ ಬಳಿಕ ಗೌರಿಬಾಯಿ ಒಬ್ಬಳೇ ‌ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಸಮಸ್ಯೆಗೆ ಹಣಕಾಸಿನ ನೆರವನ್ನು ಪತಿಯ ಸ್ನೇಹಿತ ವಗ್ಗಯ್ಯ ಅಗಾಗ್ಗೆ ನೀಡುತ್ತಿದ್ದನು, ಹಣದ ವಿಚಾರದಲ್ಲಿ ವಾಪಾಸ್ ಕೇಳಲು ಹೋದಾಗ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿ ನಾಗೇನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಳಿ ಗೌರಿಬಾಯಿಯನ್ನು ಕರೆದುಕೊಂಡು ಬಂದು
ನಿರ್ಜನ ಪ್ರದೇಶದಲ್ಲಿ ಕಬ್ಬಿಣ ರಾಡ್ ನಿಂದ ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದನ್ನು. ಆರೋಪಿಯ ಪತ್ತೆಗಾಗಿ ಭಾನುವಾರ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ  ಹಾಗೂ ಶ್ವಾನದಳದ ತಂಡದವರು ಆಗಮಿಸಿ ಕಾರ್ಯಾಚರಣೆ ನಡೆಸಿದರು. ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ವಿಕ್ರಂ ಅಮಟೆ, ಡಿವೈಎಸ್ಪಿ ಹಾಲಮೂರ್ತಿರಾವ್,ಸಿಪಿಐ ಶ್ರೀಕಾಂತ್, ಪಿಎಸ್ಐ ಕಿರಣ್  ಭೇಟಿ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!