ಚಿಕ್ಕನಲ್ಲೂರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 246 ಕ್ವಿಂಟಾಲ್‌ ರಾಗಿ ಸೀಜ್:‌ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ

ಸುದ್ದಿ ಕಡೂರು : 246.50ಕ್ವಿಂಟಾಲ್‌ನಷ್ಟು ರಾಗಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಾಲ್ಲೂಕಿನ ಚಿಕ್ಕನಲ್ಲೂರಿನಲ್ಲಿ ಆಹಾರ ಇಲಾಖೆಯ ಅಧಿಕಾರಿ ತಂಡ ಶನಿವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸರಕಾರದಿಂದ ಸಾರ್ವಜನಿಕರಿಗೆ ವಿತರಿಸುವ ಪಡಿತರ ರಾಗಿಯನ್ನು ಸಾಗಾಣಿಕೆ ಮಾಡಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಚಿಕ್ಕನಲ್ಲೂರು ಗ್ರಾಮದ ಕಾಡಪ್ಪರ ರಾಜಣ್ಣ ಮತ್ತು ಸಿ.ಕೆ. ನಾಗರಾಜ್ ಇಬ್ಬರು ಆರೋಪಿಗಳು ಕನಿಷ್ಟ ಬೆಂಬಲ ಯೋಜನೆಯಡಿಯಲ್ಲಿ ಮಾರಾಟ ಮಾಡಿ ಸರಕಾರಕ್ಕೆ ವಂಚಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ದಾವಣಗೆರೆಯಿಂದ ಚಿಕ್ಕನಲ್ಲೂರಿಗೆ ಅನಧಿಕೃತವಾಗಿ 503 ಚೀಲದಲ್ಲಿ ರಾಗಿಯನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಡೂರು ಆಹಾರನಿರೀಕ್ಷಕ ಶ್ರೀನಿವಾಸ್ ಹಾಗೂ ಅಜ್ಜಂಪುರ ಠಾಣೆಯ ಪಿಎಸೈ ಖಾದರ್ ಬಾಷಾ ನೇತೃತ್ವದಲ್ಲಿ ಸೀಜ್ ಮಾಡಿದ ಅಧಿಕಾರಿಗಳು ಆರೋಪಿತರನ್ನು ವಶಕ್ಕೆ ಪಡೆದು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 9,48 ಲಕ್ಷ ಮೌಲ್ಯದ ರಾಗಿಯನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಆಹಾರ ಇಲಾಖೆಯ ಉಪನಿರ್ದೇಶಕ ಎ.ಬಿ. ಸಂಜಯ್ ಮತ್ತು ನೇತೃತ್ವದ ಅಧಿಕಾರಿ ತಂಡ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!