ಸುದ್ದಿ ಬೀರೂರು : ಅಮೃತ ಮಹೋತ್ಸವದ ಸಂವಿಧಾನ ಜಾಗೃತಿ ಯಾತ್ರೆಯು ಇದೇ.ಫೆ.13ರ ಮಂಗಳವಾರ ಆಗಮಿಸುವ ಹಿನ್ನಲೆಯಲ್ಲಿ ಗುರುವಾರ ಪುರಸಭಾ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭಾ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಮಾತನಾಡಿ, ಸಂವಿಧಾನ ಜಾಗೃತಿ ಯಾತ್ರೆಯು ಪಟ್ಟಣಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಹಕರಿಸಬೇಕಿದೆ ಎಂದು ಕೋರಿದರು.
ಸಭೆಯಲ್ಲಿ ಪುರಸಭಾ ಸದಸ್ಯರಾದ ಲೋಕೇಶಪ್ಪ, ಬಿ.ಆರ್.ಮೋಹನ್ಕುಮಾರ್, ಮುಖಂಡರಾದ ಬಿ.ಟಿ.ಚಂದ್ರುಶೇಖರ್, ಬಿ.ಎಂ. ರುದ್ರಪ್ಪ, ವೃತ್ತನಿರೀಕ್ಷಕ ಶ್ರೀಕಾಂತ್ ಹಾಗೂ ಪುರಸಭಾ ನೌಕರರು ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು ಸಾರ್ವಜನಿಕರು ಭಾಗವಹಿಸಿದ್ದರು.