ರಥಸಪ್ತಮಿ ಪ್ರಯುಕ್ತ 108ಸೂರ್ಯನಮಸ್ಕಾರ

ಸುದ್ದಿ ಕಡೂರು : ರಥಸಪ್ತಮಿ ಪ್ರಯುಕ್ತ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶ್ರೀ ರಾಘವೇಂದ್ರ ಯೋಗಾಶಿಕ್ಷಣ ಸಂಸ್ಥೆಯ ವತಿಯಿಂದ ಶುಕ್ರವಾರ ಬೆಳಿಗ್ಗೆ 108ಬಾರಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು. 100ಕ್ಕು ಅಧಿಕ ಮಂದಿ ಸೂರ್ಯನಮಸ್ಕಾರದಲ್ಲಿ ಭಾಗವಹಿಸಿದ್ದರು.
ಮಾರ್ಗದರ್ಶನ ನೀಡಿದ ಯೋಗ ಶಿಕ್ಷಕಿ ವಿಜಯಾಗಿರೀಶ್ ಮಾತನಾಡಿ, ಪ್ರತಿದಿನ ಸೂರ್ಯನಮಸ್ಕಾರದ ಯೋಗಾಭ್ಯಾಸಗಳು ದೇಹವನ್ನು ಉಲ್ಲಸಿತಗೊಳ್ಳುತ್ತಿದೆ. ಹಲವಾರು ಆಸನಗಳು ಈ ಒಂದು ಸೂರ್ಯನಮಸ್ಕಾರದಲ್ಲಿ ಇರುವುದು ವಿಶೇಷವಾಗಿದೆ. ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಸಧೃಡವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸೂರ್ಯನಮಸ್ಕಾರದ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ಕಡೂರು ಬಿಇಒ ಆರ್.ಸಿದ್ದರಾಜುನಾಯ್ಕ್, ಆಯುಷ್ ವೈದ್ಯರಾದ ಡಾ. ಮಂಜುನಾಥ್, ಡಾ. ಲಾವಾಣ್ಯ ಡಾ. ನಿರ್ಮಲ, ಯೋಗಶಿಕ್ಷಕ ಗಿರೀಶ್ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!