ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ಓಂಕಾರಪ್ಪ ಅವಿರೋಧ ಆಯ್ಕೆ

ಸುದ್ದಿ ಕಡೂರು : ಪಟ್ಟಣದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಚಿಕ್ಕಬಾಣೂರು ಎಸ್.ಓಂಕಾರಪ್ಪ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ನಟರಾಜ್ ಅವರ ರಾಜೀನಾಮೆಯಿಂದ ಸ್ಥಾನ ತೆರವುಗೊಂಡಿತ್ತು. ಸಹಕಾರ ಸಂಘದ ಅಭಿವೃದ್ದಿ ಅಧಿಕಾರಿ ಅನುಪಮ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಎಸ್.ಓಂಕಾರಪ್ಪ ಮಾತನಾಡಿ ತಾವು ಬಾಣೂರಿನ ವಿಎಸ್‌ಎಸ್‌ಎನ್ ನಲ್ಲಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು. ಈ ಬಾರಿಯ ಪಿಕಾರ್ಡ್ ಬ್ಯಾಂಕಿನ ಚುನಾವಣೆಯಲ್ಲಿ ದೊಡ್ಡಪಟ್ಟಣಗೆರೆ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಆಯ್ಕೆಗೊಳ್ಳಲಾಯಿತು. ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದೊಂದಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಬ್ಯಾಂಕಿನ ಅಭಿವೃದ್ದಿಗಾಗಿ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ತಿಮ್ಮೇಗೌಡ, ನಿರ್ದೇಶಕರಾದ ಕೆ.ಎಚ್.ರಂಗಾನಾಥ್, ಹೆಚ್.ಎಂ.ರೇವಣ್ಣಯ್ಯ, ಎಸ್.ವಿರೂಪಾಕ್ಷಪ್ಪ, ಕಲ್ಲೇಶಪ್ಪ, ನಂಜುಡಪ್ಪ, ಯತೀಶ್, ಮೋಹನ್‌ನಾಯ್ಕ, ಟಿ.ಶಂಕರಪ್ಪ, ಆರ್. ಶ್ರೀನಿವಾಸಮೂರ್ತಿ, ರೇಣುಕಮ್ಮ, ಕೆ.ಕೆ.ಪುಪ್ಪಾಲತಾ ಸೋಮೇಶ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೆಟ್ಟಿಹಳ್ಳಿರಾಮಪ್ಪ, ಮುಖಂಡರಾದ ಎಸ್.ಮಲ್ಲೇಗೌಡರು, ಜಿ.ಎನ್.ಪ್ರಕಾಶ್, ಸೋಮಶೇಖರ್, ಜಯಣ್ಣ, ನಂಜುಡಪ್ಪ, ಚನ್ನಬಸಪ್ಪ, ಮಂಜನಾಯ್ಕ, ವಕೀಲ ಎಸ್.ಎನ್. ಸುಮುಖ್, ಎಚ್.ಬಿ. ವರುಣ್ ಬ್ಯಾಂಕಿನ ವ್ಯವಸ್ಥಾಪಕ ಹನುಮಂತರಾಯ ಹಾಗೂ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!