ಸುದ್ದಿಕಡೂರು : ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಲೋಕಸಭಾ ಚುನಾವಣೆಯ ಸಂಬ0ಧ ಅಕ್ರಮವನ್ನು ತಡೆಗಟ್ಟಲು ಹಾಕಲಾಗಿದ್ದ ಬಸವನಹಳ್ಳಿದಿಬ್ಬದ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ನಗದು ಹಣವನ್ನು ಎಫ್ಎಸ್ಸಿ ತಂಡದ ಅಧಿಕಾರಿಗಳು ಮಂಗಳವಾರ ಸಂಜೆ ಜಪ್ತಿ ಮಾಡಿದ್ದಾರೆ. ಛತ್ತಿಸ್ಗಡಮೂಲದ ಅನಿಲ್ ಎಂಬುವವರು ಕಾರಿನಲ್ಲಿ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ತಪಾಸಣೆ ನಡೆಸುವ ವೇಳೆ ಅನಿಲ್ ಅವರ ಹಣಕ್ಕೆ ಪೂರಕ ದಾಖಲೆಗಳು ನೀಡದ ಹಿನ್ನಲೆಯಲ್ಲಿ ಹಣವನ್ನು ವಶಕ್ಕೆ ಪಡೆದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣದಡಿ ದೂರುದಾಖಲಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಿಎಸೈ ನವೀನ್ ಎಫ್ಎಸ್ಸಿ ತಂಡದ ಚಂದ್ರಶೇಖರ್ ಮೋಹಿತ್, ವಿನಾಯಕ್, ಸುರೇಶ್ ಇದ್ದರು.