ತೋಟದ ಕಾರ್ಮಿಕನ ಅಂದಿನ ಮದುವೆ ಪೋಟೊಗ್ರಾಫರ್ ಇಂದಿನ ಬಿಜೆಪಿ ಅಭ್ಯರ್ಥಿ

ಚಿಕ್ಕಮಗಳೂರು: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಮಾಜಿ ಸಚಿವ ಡಿ.ಎನ್ ಜೀವರಾಜ್ ಅವರ ತೋಟದ ಕಾರ್ಮಿಕರೊಬ್ಬರ ಮದುವೆಗೆ ಫೋಟೋಗ್ರಾಫರ್ ಆಗಿ ಹೋಗಿದ್ದರಂತೆ!

ಮಾಜಿ ಸಚಿವ ಡಿ.ಎನ್ ಜೀವರಾಜ್ ಬಹುತೇಕರಿಗೆ ಗೊತ್ತಿಲ್ಲದ ವಿಚಾರವನ್ನು ಎನ್‌.ಆರ್.ಪುರದ ಬಿಜೆಪಿ ಪ್ರಚಾರದ ಸಭೆಯಲ್ಲಿ ಕುತೂಹಲಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅವರ ತೋಟದ ಕಾರ್ಮಿಕ ಲಕ್ಷ್ಮಣ್ ಅವರ ಮದುವೆಯ ಫೋಟೋವನ್ನು ಕೋಟಾ ಶ್ರೀನಿವಾಸ್ ಪೂಜಾರಿ ತೆಗೆದಿದ್ದಂತೆ.

ಫೋಟೋಗ್ರಾಫಿಯಿಂದ ರಾಜಕಾರಣದ ವರೆಗೆ ಆಗಿರುವ ಬೆಳವಣಿಗೆ ಬಗ್ಗೆ ಕಥೆ ಕೇಳಿದವರು ಖುಷಿ ಪಡುತ್ತಿದ್ದಾರೆ. ಇದು ಬಿಜೆಪಿ ಪಕ್ಷ ಅಂದ್ರೆ… ಎಂದು ಕಾರ್ಯಕರ್ತರು ಹೆಮ್ಮೆ ಪಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!