ಸುದ್ದಿ ಬೀರೂರು: ಜೆಪಿಎಫ್ ಮತ್ತು ಜಿಐಎಸ್ ಮೆಚ್ಯೂರಿಟಿ ಹಣದ ಬಿಲ್ಲು ಮಾಡಿಕೊಡಲು 35ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಗುಮಾಸ್ತ ಚಂದ್ರುಶೇಖರ್ ಲೋಕಾಯುಕ್ತ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ.
ತರೀಕೆರೆ ತಾಲ್ಲೂಕಿನ ಬೀರೂರು ವಲಯದ ಹೊಸಗಂಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಪರಮೇಶ್ ಮುಖ್ಯಶಿಕ್ಷಕನಾಗಿ ಕಳೆದ ಡಿ.30ರಂದು ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರದ ಸರಕಾರಿ ಸೌಲಭ್ಯಗಳ ಪಡೆಯಲು ಬರಬೇಕಾದ ಮೆಚ್ಯೂರಿಟಿ ಹಣ ಪಡೆಯಲು ಗುಮಾಸ್ತನ ಬಳಿ ಕೋರಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೆಚ್ಯೂರಿಟಿ ಹಣ ಕೊಡಿಸಲು ಪೋನ್ ಮೂಲಕ ಸಂಭಾಷಣೆ ನಡೆಸಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಪರಮೇಶ್ ದೂರು ನೀಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಇನ್ಸ್ ಫೇಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.