ಸುದ್ದಿ ಕಡೂರು : ಕಾಫಿನಾಡಿನ ಕಮಲಾಧಿಪತಿಯಾದ ದೇವರಾಜ್ ಶೆಟ್ಟಿ….
ಅಳೆದು ತೂಗಿಯ ಲೆಕ್ಕಚಾರದೊಂದಿಗೆ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಕಳೆದ ಒಂದು ತಿಂಗಳಿನಿಂದ ಕಾಫಿನಾಡಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಲಿದ್ದಾರೆ ಎಂಬ ಗೊಂದಲಕ್ಕೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಚಿಕ್ಕಮಗಳೂರು ಜಿಲ್ಲೆಗೆ ನೂತನ ಅಧ್ಯಕ್ಷರಾಗಿ ದೇವರಾಜ ಶೆಟ್ಟಿ ಅವರನ್ನು ಆಯ್ಕೆಗೊಳಿಸಿದೆ.
ಸಂಕ್ರಾಂತಿಯ ಹಬ್ಬದ ಕೊಡುಗೆಯಾಗಿ
ಭಾನುವಾರ ಸಂಜೆ ಬಿಡುಗಡೆಗೊಂಡ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಪಟ್ಟಿಯಲ್ಲಿ ರಾಜ್ಯದ 39 ಜಿಲ್ಲಾ ಕೇಂದ್ರಗಳ ಬಿಜೆಪಿ ಅಧ್ಯಕ್ಷರಗಳ ಒಳಗೊಂಡ ಪಟ್ಟಿಯನ್ನು ಬಿಜೆಪಿ ಘಟಕ ಬಿಡುಗಡೆಗೊಳಿಸಿದೆ.