ಸುದ್ದಿ ಚಿಕ್ಕಮಗಳೂರು : ಕಾಫಿನಾಡಿಗೆ ನಿರೀಕ್ಷೆಯಂತೆ ಒಲಿದ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಇಂಧನ ಅಭಿವೃದ್ಧಿ ನಿಗಮ ನಿಯಮಿತದ ಬೋರ್ಡ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವರ್ಷದ ಅವಧಿಯವರೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ನಿಗಮ ಮಂಡಳಿಯ ಸ್ಥಾನಗಿಟ್ಟಿಸಿಕೊಳ್ಳಲು ಜಿಲ್ಲೆಯ ಪಕ್ಷದ ಆಕಾಂಕ್ಷಿತಮುಖಂಡರು ಸಾಕಷ್ಟು ಕಸರತ್ತು ನಡೆಸಿದ್ದರು ಫಲ ಈಡೇರಲಿಲ್ಲ. ಅಂತಿಮವಾಗಿ ಜಿಲ್ಲೆಯ ಮಲೆನಾಡು ಭಾಗದ ಕಾಂಗ್ರೆಸ್ ಶಾಸಕನಿಗೆ ಸರಕಾರ ಮಣೆಹಾಕಿದಂತಾಗಿದೆ.