ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಅಂದರ್: ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲು

ಸುದ್ದಿಕಡೂರು: ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಕೆರೆಗೆ ಹಾಕಿದ್ದ ಆರೋಪಿಯನ್ನು ಶವ ಪತ್ತೆಯಾದ 24 ಗಂಟೆಯೊಳಗೆ ಯಗಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಬ್ಯಾಗಡೇಹಳ್ಳಿ ಗ್ರಾಮದ ಮಂಜುಳಾ ( 40) ಹತ್ಯೆಯಾದ ಮಹಿಳೆ. ಈಕೆಯ ಜೊತೆ ಸಂಬಂಧವಿಟ್ಟುಕೊಂಡಿದ್ದ ಚಿಕ್ಕಬಾಸೂರಿನ ತಮ್ಮಯ್ಯ ಎಂಬಾತ ಆಕೆಯೊಡನೆ ಜಗಳವಾಡಿಕೊಂಡು ಉಸಿರುಗಟ್ಟಿಸಿ ಹತ್ಯೆ ಮಾಡಿ ನಂತರ ಆಕೆಯ ಮೃತದೇಹವನ್ನು ಬಿಳುವಾಲದ ಕೆರೆಯಲ್ಲಿ ಮುಳುಗಿಸಿದ್ದ. ಮಹಿಳೆ ಕಾಣೆಯಾದ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಜ. 21 ರಂದು ದೂರು ದಾಖಲಾಗಿತ್ತು. ನಂತರ 27 ರಂದು ಬಿಳುವಾಲ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು 28 ರಂದು ತಲೆಮರೆಸಿಕೊಂಡಿದ್ದ ಆರೋಪಿ ತಮ್ಮಯ್ಯನನ್ನು ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಮಂಜುನಾಥ ಎಂಬುವವರನ್ನು ಪತ್ತೆ ಮಾಡಿ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಡೂರು ಸಿಪಿಐ ಶ್ರೀಕಾಂತ್ ನೇತೃತ್ವದ ಕಾರ್ಯಾಚರಣೆಯಲ್ಲಿ ಯಗಟಿ ಪಿಎಸೈ ರಂಗನಾಥ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!