ಸುದ್ದಿ ಕಡೂರು : ಪಟ್ಟಣದ ಕೆ.ಎಂ. ರಸ್ತೆಯಲ್ಲಿರುವ ರೇಲ್ವೆಗೇಟ್ನಿಂದ ವಾಹನಸವಾರರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಹಾಗೂ ರೈಲ್ವೆ ಓವರ್ ಬ್ರಿಡ್ಜ್ವೊಂದನ್ನು ಗಣಪತಿ ಪೆಂಡಾಲ್ ಮುಂಭಾಗದ ರಸ್ತೆಯಿಂದ ಸುಭಾಷ್ ವೃತ್ತದವರಗೆ ನಿರ್ಮಿಸಲು ಅನುಮತಿ ನೀಡಲು ಮತ್ತು ಕಡೂರು ರೈಲ್ವೆ ನಿಲ್ದಾಣದಲ್ಲಿ ಹಿರಿಯ ಪ್ರಯಾಣಿಕರಿಗೆ ನಿಲ್ದಾಣದ ಮೆಟ್ಟಿಲುಗಳು ಹತ್ತಿ ಬರಲು ಕಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಸುಸಜ್ಜಿತವಾದ ಎಸ್ಕಲೇಟರ್ ವ್ಯವಸ್ಥೆ ಅಳವಡಿಸಿ, ಅಧುನಿಕ ಮಟ್ಟದಲ್ಲಿ ಸ್ವಚ್ಚತೆ, ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟು ರೈಲ್ವೆ ನಿಲ್ದಾಣವನ್ನು ಅಭಿವೃದ್ದಿಗೊಳಿಸಿಕೊಡುವಂತೆ ಶಾಸಕ ಕೆ.ಎಸ್.ಆನಂದ್ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತಾಗಿ ಕೇಂದ್ರ ರೈಲ್ವೆ ಸಚಿವರು ಮನವಿಗೆ ಪೂರಕವಾಗಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ವಿಶ್ವಾಸವ್ಯಕ್ತಪಡಿಸಿದರು.