ಸುದ್ದಿ ಕಡೂರು : ಬೈಕ್ಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಬಂಧಿಸಿ ಒಟ್ಟು 1.38 ಲಕ್ಷ ಮೌಲ್ಯದ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.
ಶಿವಮೊಗ್ಗದ ಟಿಪ್ಪುನಗರ ವಾಸಿಯಾದ ಮಹಮ್ಮದ್ ಅಫ್ಜಲ್ ಎಂಬಾತ ಆರೋಪಿಯು ಪಟ್ಟಣದ ವಿಜಯಲಕ್ಷ್ಮೀ ಚಿತ್ರಮಂದಿರದ ಬಳಿಯ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಪೊಲೀಸರು ವಿಚಾರಣೆ ಒಳಪಡಿಸಿದ ಹಿನ್ನಲೆಯಲ್ಲಿ ಬೈಕ್ನ ಯಾವುದೇ ದಾಖಲೆಗಳು ಲಭ್ಯ ಇಲ್ಲದ ಪರಿಣಾಮ ವಿಚಾರಣೆಯಲ್ಲಿ ನಾಲ್ಕು ಬೈಕ್ಗಳನ್ನು ಕಳುವು ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು. ಬಂಧಿತ ಆರೋಪಿಯಿಂದ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆ, ಬೀರೂರು, ತರೀಕೆರೆ ಮತ್ತು ಕಡೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದೊoದು ಬೈಕ್ ಕಳ್ಳತನವಾಗಿರುವ ಬಗ್ಗೆ ಪ್ರಕರಣಗಳು ದಾಖಲುಗೊಂಡಿದ್ದವು. ತನಿಖೆಯ ಕಾರ್ಯಚರಣೆಯಲ್ಲಿ ಸಿಪಿಐ ದುರ್ಗಪ್ಪ, ಪಿಎಸೈಗಳಾದ ಎಂ.ಆರ್. ಧನಂಜಯ್. ಪವನ್ಕುಮಾರ್, ನವೀನ್, ಶೋಭಾ, ಸಿಬ್ಬಂದಿಗಳಾದ ಮಧು, ರೇಣುಕಾಪ್ರಸಾದ್, ಧನಪಾಲ್ನಾಯ್ಕ, ಮಧು, ನಯಾಜ್ ಅಂಜುಮ್ ಇದ್ದರು.