ಸುದ್ದಿ ಕಡೂರು : ತಾಲ್ಲೂಕಿನ ಅಂತರಘಟ್ಟೆ ಸಮೀಪದ ನರಿಗೆಕಲ್ಲು ಕಟ್ಟೆಯ ಬಳಿ ನೀರು ತುಂಬಿಕೊಳ್ಳಲು ಹೋಗಿದ್ದ ಬಾಲಕನೋರ್ವನು ಕಟ್ಟೆಯ ಹೊಂಡಕ್ಕೆ ಮುಗ್ಗರಿಸಿ ಬಿದ್ದಪರಿಣಾಮ ಉಸಿರುಗಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಅಮೃತಾಪುರ ಸಮೀಪದ ಸಮತಳ ಗ್ರಾಮದ ಸಾತ್ವಿಕ್(13) ಮೃತಪಟ್ಟ ದುರ್ದೈವಿಯಾಗಿದ್ದು, ನರಿಗೆ ಕಲ್ಲುಕಟ್ಟೆ ಬಳಿ ಯಾವುದೇ ಸುರಕ್ಷತಾ ಕ್ರಮಗಳು ಅಳವಡಿಸಿದೆ ಇರುವುದು ಈ ದುರ್ಘಟನೆ ಸಂಭವಿಸಲು ಕಾರಣವಾಗಿದೆ ಎಂದು ಸ್ಥಳೀಯರು ಸಂಬoಧಿಸಿದ ಅಧಿಕಾರಿಗಳ ವಿರುದ್ದ ಅಕ್ರೋಶವ್ಯಕ್ತಪಡಿಸಿದರು. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.