ಸುದ್ದಿ ಕಡೂರು : ತಾಲ್ಲೂಕಿನ ಪಂಚನಹಳ್ಳಿಯ ಕೆನರಾ ಬ್ಯಾಂಕ್ ಶಾಖೆಯಿಂದ ಬುಧವಾರ ಓಮಿನಿ ಕಾರಿನಲ್ಲಿ ದೊಡ್ಡಮೇಟಿ ಕುರ್ಕೆ ಗ್ರಾಮಕ್ಕೆ ಪೂರಕ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 20ಲಕ್ಷ ನಗದು ಹಣವನ್ನು ಚೌಡಿಪಾಳ್ಯ ಬಳಿ ಹಾಕಲಾಗಿದ್ದ ಚೆಕ್ ಪೋಸ್ಟ್ ಬಳಿ ಎಫ್ಎಸ್ ಸಿ ತಂಡದ ಅಧಿಕಾರಿಗಳು ತಪಾಸಣೆ ನಡೆಸಿ ನಗದು ಹಣವನ್ನು ವಶಕ್ಕೆ ಪಡೆದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದಾರೆ.