ಸುದ್ದಿ ಕಡೂರು : ದೇವಸ್ಥಾನದ ಹಣ ಸ್ವಂತ ಬಳಕೆಗೆ ಬಳಸಿಕೊಂಡು ಗ್ರಾಮಸ್ಥರಿಗೆ ಗೊತ್ತಾಗುತ್ತದೆ ಎಂದು ಭಯಪಟ್ಟುಕೊಂಡು ಯುವಕನೊರ್ವ ಮನನೊಂದು ಪಟ್ಟಣದ ಲಾಡ್ಜವೊಂದರಲ್ಲಿ ವಿಷಸೇವಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ
ತಾಲ್ಲೂಕಿನ ಬೋಳನಹಳ್ಳಿ ಗ್ರಾಮದ ವರುಣ(22) ಮೃತಪಟ್ಟ ದುರ್ದೈವಿಯಾಗಿದ್ದು, ಅ.28ರ ಶನಿವಾರದಂದು ಖಾಸಗಿ ಲಾಡ್ಜ್ವೊಂದರಲ್ಲಿ ವಿಷಸೇವಿಸಿ ಅಸ್ಪಸ್ಥಗೊಂಡ ಹಿನ್ನಲೆಯಲ್ಲಿ ಸಂಬAಧಿಕರು ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದು, ಊರಿನ ದೇವಸ್ಥಾನಕ್ಕೆ ಮಂಜೂರಾಗಿದ್ದ 1.10 ಲಕ್ಷ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡು ಖರ್ಚು ಮಾಡಿಕೊಂಡಿದ್ದು, ಈ ವಿಚಾರ ಊರಿನವರಿಗೆ ತಿಳಿಯಲಿದೆ ಎಂಬ ಆತಂಕಗೊAಡು ವಿಷ ಕುಡಿದಿರಬಹುದು ಅಥವಾ ಯಾರಾದರೂ ಹೆದರಿಸಿದ್ದಾರೋ ತಿಳಿಯದ ಹಿನ್ನಲೆಯಲ್ಲಿ ಈತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೃತನ ತಂದೆ ಹನುಮನಾಯ್ಕ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ