ಸುದ್ದಿಕಡೂರು : ಪುನೀತ್ ರಾಜ್ ಕುಮಾರ್ ಅವರ ಮಾನವೀಯ ಮೌಲ್ಯಗಳು ನಮಗೆಲ್ಲ ಮಾದರಿಯಾಗಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಅವರು ಪಟ್ಟಣದ ಬಸ್ ನಿಲ್ದಾಣದ ಸಮೀಪ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ 2ನೇ ವರ್ಷದ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುನೀತ್ ರಾಜಕುಮಾರ್ ಬದುಕಿರುವವರೆಗೆ ಅವರು ಮಾಡಿದ ಸೇವೆಗಳು ಬೆಳಕಿಗೆ ಬರಲಿಲ್ಲ.ಪುನೀತ್ ತಾವು ಮಾಡಿದ ಉಪಕಾರಕ್ಕೆ ಎಂದೂ ಪ್ರಚಾರ ಪಡೆದುಕೊಳ್ಳಲಿಲ್ಲ.ತಮ್ಮ ದುಡಿಮೆಯ ಬಹುಪಾಲು ಹಣವನ್ನು ಜನರ ಸೇವೆಗಾಗಿ ಮುಡುಪಾಗಿಟ್ಟರು.ಒಳ್ಳೆಯವರನ್ನು ಭಗವಂತ ಬಹುಬೇಗ ಕರೆಸಿಕೊಳ್ಳುತ್ತಾನೆ ಎಂಬುದಕ್ಕೆ ಪುನೀತ್ ರಾಜ್ಕುಮಾರ್ ಅವರ ಸಾವು ಉದಾಹರಣೆ ಎಂದರು. ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಕೇವಲ ಚಿತ್ರರಂಗ ಮಾತ್ರ ಬಡವಾಗಿಲ್ಲ.ಇಡೀ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ.ಪುನೀತ್ ಜಾಗವನ್ನು ತುಂಬಲು ಮತ್ಯಾರಿಂದಲೂ ಸಾಧ್ಯವಿಲ್ಲ.ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎನ್ನುವ ಕಾರಣಕ್ಕೆ ಕಡೂರಿನಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು.
ಪುರಸಭಾ ಸದಸ್ಯ ಮರಗುದ್ದಿ ಮನು, ಪಂಗ್ಲಿ ಮಂಜುನಾಥ್,ನಿವೃತ್ತ ಯೋಧರ ಸಂಘದ ಅಧ್ಯಕ್ಷ ಶೇಖರಪ್ಪ,ನಿವೃತ್ತ ಯೋಧರಾದ ಯೋಗೀಶ್,ಲೋಕೇಶ್,ಬಿಎಸ್ಎಫ್ ಯೋಧೆ ತಾರಾ, ಮುಖಂಡರಾದ ಚೇತನ್ ಕೆಂಪರಾಜು, ಸಂತೋಷ್,ನಂದೀಶ್ ಗೌಡ, ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷ ಹರ್ಷಿತ್ಗೌಡ, ರುದ್ರೇಗೌಡ,ಆನಂದ್,ಮನು, ಜಗದೀಶ್,ವಿನೋದ್ ಮತ್ತಿತರರಿದ್ದರು.