ಸುದ್ದಿ ಕಡೂರು: 2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕಡೂರು ತಾಲ್ಲೂಕು ತೀವ್ರ ಬರಪೀಡಿತ ಎಂದು ಸರ್ಕಾರವು ಘೋಷಣೆ ಮಾಡಿದ್ದು. ಮುಂಗಾರು ವೈಫಲ್ಯವಾಗಿದ್ದರಿಂದ ತಾಲ್ಲೂಕಿನಲ್ಲಿ ವಿವಿಧ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿರುತ್ತದೆ. ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಪಡೆಯಲು ರೈತರು
ಫ್ರಟ್ಸ್ ತಂತ್ರಾಂಶದಲ್ಲಿ ಎಫ್.ಐ.ಡಿ (FID) ಕಡ್ಡಾಯವಾಗಿ ಮಾಡಿಸತಕ್ಕದ್ದು.
ರೈತರು FID ಗೆ ತಮ್ಮ ಎಲ್ಲಾ ಪಹಣಿಗಳನ್ನು ಸೇರಿಸಬೇಕು,
ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮಾಹಿತಿ ಲಭ್ಯವಿರುವುದರ ಬಗ್ಗೆ ‘ಬೆಳೆ ದರ್ಶಕ ಮೊಬೈಲ್ ಆಪ್ ಮುಖಾಂತರ ಖಾತರಿಪಡಿಸಿಕೊಳ್ಳುವುದು.
ಕಡೂರು ತಾಲ್ಲೂಕಿನಲ್ಲಿ ಒಟ್ಟು 76,957 ಭೂ ಹಿಡುವಳಿದಾರರು 1,95,360 ಭೂ ದಾಖಲೆಗಳನ್ನು ಹೊಂದಿರುತ್ತಾರೆ. ಶೇ.58 ರಷ್ಟು ಮಾತ್ರ ಪಹಣಿಗಳನ್ನು ಪ್ರೋಟ್ಸ್ ತಂತ್ರಾಂಶದ ಎಫ್.ಐ.ಡಿ ಗೆ ಲಿಂಕ್ ಮಾಡಲಾಗಿರುತ್ತದೆ. ಇನ್ನುಳಿದ ಪಹಣಿಗಳನ್ನು ರೈತರು ತಮ್ಮ ಎಫ್.ಐ.ಡಿ ಗೆ ಸೇರ್ಪಡೆ ಮಾಡಿಸಿಕೊಳ್ಳಬೇಕು.
ಹೊಸದಾಗಿ ಮಾಡಿಸೋಕೆ ಏನ್ ಬೇಕು?
ಹೊಸದಾಗಿ ಎಫ್.ಐ.ಡಿ ಮಾಡಿಸಿಕೊಳ್ಳಲು ಹಾಗೂ ಪಹಣಿಗಳನ್ನು ಎಫ್.ಐ.ಡಿ ಗೆ ಸೇರ್ಪಡೆ ಮಾಡಿಕೊಳ್ಳಲು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಎಸ್.ಪಾಟೀಲ್ ತಿಳಿಸಿದ್ದಾರೆ.