ಪಂಚನಹಳ್ಳಿಯಲ್ಲಿ ನಾಳೆ ಅಂಚೆ ಜನ ಸಂಪರ್ಕ ಅಭಿಯಾನ

ಸುದ್ದಿ ಕಡೂರು: ಗ್ರಾಮ ಪಂಚಾಯತಿ,ಸಂಚಾರಿ ವಿಜಯ್ ಸ್ಪೋರ್ಟ್ಸ್ ಕ್ಲಬ್ ಮತ್ತು ಭಾರತೀಯ ಅಂಚೆ ಇಲಾಖೆ ಇವರ ಸಹಯೋಗದಲ್ಲಿ ಮಂಗಳವಾರ ಪಂಚನಹಳ್ಳಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಜೀವ ವಿಮೆ,ಅಪಘಾತ ವಿಮೆ,ಉಳಿತಾಯ ಖಾತೆ, ಮಹಿಳಾ ಸಮ್ಮಾನ್ ಖಾತೆ, ಎನ್.ಪಿ.ಸಿ.ಐ.ಆಧಾರ್ ಜೋಡಣೆ, ಐ.ಪಿ.ಪಿ.ಬಿ. ಆನ್ ಲೈನ್ ಖಾತೆ ಮತ್ತು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇರಿದಂತೆ ಅಂಚೆ ಇಲಾಖೆಯ ಇತರೆ ಸೇವೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!