ಕಡೂರು ಟೌನ್‌ ಕೋಅಪರೇಟಿವ್‌ ಸೊಸೈಟಿಗೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಸುದ್ದಿ ಕಡೂರು : ಕಡೂರು ಟೌನ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ವಿ.ಎಂ.ಪ್ರಸಾದ್ ಮತ್ತು ಉಪಾಧ್ಯಕ್ಷೆಯಾಗಿ ಅನಿತಾ ಸುದರ್ಶನ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷರಾಗಿದ್ದ ಕೆ.ಜಿ.ಶ್ರೀನಿವಾಸ್ ಮೂರ್ತಿ, ಉಪಾಧ್ಯಕ್ಷರಾಗಿದ್ದ ಆರ್. ಚಂದ್ರುಶೇಖರ್ ಅವರ ರಾಜೀನಾಮೆಯಿಂದ ಸ್ಥಾನಗಳು ತೆರವಾಗಿದ್ದವು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಅನುಪಮಾ ಕಾರ್ಯನಿರ್ವಹಿಸಿದರು.
 ಬಳಿಕ ನಡೆದ ಅಭಿನಂದನಾ‌ ಸಭೆಯಲ್ಲಿ ಸೊಸೈಟಿಯ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೆ.ಬಿ.ಸೋಮೇಶ್ ಮಾತನಾಡಿ,

 ಎಲ್ಲಾ ನಿರ್ದೇಶಕರುಗಳ ಒಗ್ಗಟ್ಟಿನಿಂದಾಗಿ ಸೊಸೈಟಿಯು ಅಭಿವೃದ್ಧಿಗೊಂಡಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಲಾಗಿದೆ. ಸೊಸೈಟಿಯಿಂದ ವಾರ್ಷಿಕವಾಗಿ 1ಕೋಟಿರೂ ಸಾಲ ನೀಡಲಾಗುತ್ತಿದೆ. ಹೊಸ ಸಾಲವನ್ನು 50ಸಾವಿರ ರೂಗಳವರೆಗೆ ನೀಡಲಾಗುತ್ತಿದೆ. ಷೇರುದಾರರು ಮರಣ ಹೊಂದಿದರೆ 2ಸಾವಿರ ರೂ ಅಂತ್ಯ ಸಂಸ್ಕಾರಕ್ಕೆ ಹಣ ನೀಡಲಾಗುತ್ತಿದ್ದು, ಜೊತೆಯಲ್ಲಿ ಷೇರುದಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಹಲವಾರು ಯೋಜನೆಗಳ ಮ‌ೂಲಕ ಅಭಿವೃದ್ಧಿಗೊಳಿಸಲಾಗಿದ್ದು, 1950ಜನ ಷೇರುದಾರರಿದ್ದು, 4.50ಕೋಟಿ  ವ್ಯವಹಾರ ನಡೆಸಲಾಗುತ್ತಿದೆ ಸಾಲದ ಮರುಪಾವತಿ ಉತ್ತಮರೀತಿಯಲ್ಲಿ ನಡೆಯುತ್ತಿದೆ ಎಂದರು.
ನೂತನ ಅಧ್ಯಕ್ಷ ವಿ.ಎಂ. ಪ್ರಸಾದ್ ಮಾತನಾಡಿ ಎಲ್ಲಾ ನಿರ್ದೇಶಕರುಗಳ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದು, ಅವರುಗಳ ನಂಬಿಕೆಗೆ ತಕ್ಕಂತೆ ಉತ್ತಮ ಕಾರ್ಯ ಮಾಡಲಾಗುತ್ತದೆ. ಸೊಸೈಟಿಯ ಹೆಚ್ಚಿನ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸಲಾಗುವುದು ಎಂದರು.
ಈ‌ಸಂದರ್ಭದಲ್ಲಿ ನಿರ್ದೇಶಕರಾದ ಕೆ.ಎಚ್.ರವಿ , ಕೆ.ಎಸ್. ರಿಯಾಜ್ ಅಹ್ಮದ್, ಅಜೇಯ್ ಕುಮಾರ್ ಒಡೆಯರ್, ಕೃಷ್ಣಮೂರ್ತಿ ಜೋಶಿ, ಕೆ.ಕೆ. ಮಂಜು, ಕೆ.ಟಿ. ಗೋವಿಂದಪ್ಪ, ಸುಶೀಲಾ ಶ್ರೀನಿವಾಸ್, ಟಿ.ಆರ್.ರೇಣುಕಪ್ಪ, ಕೆ.ಕೆ.ವಾಸು ಕೆ.ಜಿ.ಲೋಕೇಶ್ವರ್‌ ಕಾರ್ಯನಿರ್ವಹಣಾಧಿಕಾರಿ ಚನ್ನಕೇಶವ ಹಾಗೂ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!