ಸುದ್ದಿಕಡೂರು : ಚಲನಚಿತ್ರಗಳ ಪ್ರೇಮಿಯಾಗಿರುವ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಗರಡಿ ಚಿತ್ರದಲ್ಲಿ ತಮ್ಮ ಅಭಿನಯದೊಂದಿಗೆ ಚಿತ್ರದ ನಾಯಕ ನಟರುಗಳ ತಂದೆ ಪಾತ್ರದಲ್ಲಿ ಮಿಂಚಿದ್ದಾರೆ.
ಯೋಗರಾಜ ಭಟ್ ನಿರ್ದೇಶನ ಮತ್ತು ಬಿ.ಸಿ.ಪಾಟೀಲ್ ನಿರ್ಮಾಣದಲ್ಲಿ ನಾಯಕ ನಟರಾದ
ದರ್ಶನ್ ತೂಗುದೀಪ್ ಹಾಗೂ ಸೂರ್ಯ ನಟಿಸಿರುವ ಗರಡಿ ಚಿತ್ರವು ನ.10ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದ್ದು, ಚಿತ್ರದಲ್ಲಿ ನಾಯಕನಟರಾದ ದರ್ಶನ್ ಮತ್ತು ಸೂರ್ಯ ಇವರುಗಳ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋರ್ ಪಿಟ್ ಪೈಲಾನ್ ಬಂಡೇ ಸೀನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೋರ್ ಪಿಟ್ ಫೈಲಾನ ಎಂದರೆ ಯಾರ ಎದುರಿನಲ್ಲಿಯೂ ಸೋಲದ ಪೈಲಾನನಾಗಿರುತ್ತಾನೆ. ವಿಲನ್ ಪಾತ್ರಧಾರಿ ರವಿಶಂಕರ್ ಮತ್ತು ಸಹಚರರು ಪೈಲ್ವಾನ್ ಬಂಡೆ
ಸೀನನನ್ನು ಹತ್ಯೆ ಮಾಡಲಿದ್ದಾರೆ., ನಂತರ ಗರಡಿ ಚಿತ್ರದ ಕಥೆಯ ತಿರುಳು ಪ್ರಾರಂಭವಾಗಲಿದೆ.
ಇದೆ ಜೊತೆಯಲ್ಲಿ “ಕಡೂರು ಧರ್ಮಣ್ಣ” ಕೂಡ ಗರಡಿ ಚಿತ್ರದ ಹಾಸ್ಯನಟನ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ಕಡೂರಿಗೆ ಚಿತ್ರದ ನಂಟನ್ನು ಗಟ್ಟಿಗೊಳಿಸಿದೆ.
ನಿರ್ದೇಶಕರು ಹೇಳಿದ ರೀತಿಯಲ್ಲಿ ನಟಿಸಿದ್ದಾನೆ. ನಾನು ಯಾವುದೇ ಕಲಾವಿದನಲ್ಲ ಎಲ್ಲಾ ಭಾಷೆಯ ಚಲನಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಚಿತ್ರದಲ್ಲಿ ವಿಭಿನ್ನ ಪಾತ್ರವಾಗಿ ಮಾಡಿದ ಅನುಭವ ಮತ್ತು ಕಲಾವಿದನಾಗಿ ಅಭಿನಯಿಸಿರುವುದು ಖುಷಿಕೊಟ್ಟಿದೆ.
– ಬೆಳ್ಳಿಪ್ರಕಾಶ್, ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ.