ಸುದ್ದಿ ಕಡೂರು : ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದ ಹಿರಿಯ ಜಾನಪದ ಕಲಾವಿದೆ ಚೌಡಮ್ಮ ಅವರಿಗೆ ಪಟ್ಟಣದ ಶಾಸಕರ ಜನಸೇವಕ ಕಚೇರಿಯಲ್ಲಿ ಮಂಗಳವಾರ ಶಾಸಕ ಕೆ.ಎಸ್. ಆನಂದ್ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬೀರೂರು ಪುರಸಭೆ ಸದಸ್ಯ ಶಶಿಕುಮಾರ್, ಶ್ರೀಕಂಠ ಒಡೆಯರ್, ಧರ್ಮರಾಜ್, ಜ್ಞಾನೇಶ್, ಚಂದ್ರುಶೇಖರ್, ಮಾಡಾಳು ನಾಗೇಂದ್ರ ಮತ್ತಿತರಿದ್ದರು.
ಜಾನಪದಕ್ಕೆ ಎಲ್ಲೆಯೆಂಬುದಿಲ್ಲ, ಅದು ವಿಶ್ವವ್ಯಾಪಿಯಾದದ್ದು, ಪ್ರಪಂಚದ ಮೂಲೆ ಮೂಲೆಯಲ್ಲಿ ಜಾನಪದ ಕಲೆಗೆ ಮನ್ನಣೆ ಇದ್ದು ಜನಪದರನ್ನು ಗೌರವಿಸುವ ಹಾಗೂ ಜಾನಪದ ಕಲೆಯನ್ನು ಉಳಿಸಿಬೆಳೆಸುವ ಕಾರ್ಯಕ್ಕೆ ಮುಂದಾಗಿರುವ ಕ್ಷೇತ್ರದ ಹಿರಿಯ ಜಾನಪದ ಕಲಾವಿದೆ ಚಿಕ್ಕಬಾಸೂರು ಚೌಡಮ್ಮ ಅವರಿಗೆ ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿರುವುದು ಹೆಮ್ಮೆಯ ಸಂಗತಿ