ಸುದ್ದಿ ಕಡೂರು : ಪಟ್ಟಣದ ಬಂಡಿಕೊಪ್ಪಲು ರಸ್ತೆಯಲ್ಲಿರುವ ಶಾರದಾ ಎಲೈಟ್ ರೂರಲ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳು ಪಂಚನಹಳ್ಳಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಿ.ಎಲ್. ದೀಕ್ಷ(ಅಭಿನಯಗೀತೆ), ಆರ್.ಜೆ. ಅರ್ಷಿಕ(ಲಘುಸಂಗೀತ), ಆರ್.ಕೆ. ಬೂನಮಿ(ಕಥಾ ಸ್ಪರ್ಧೆ) ಕೃತಿಕಾ(ಕಂಠಪಾಠ) ಹಾಗೂ ಪಿ.ಎ. ಚೇತನ್(ಛದ್ಮವೇಷ) ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಅಧ್ಯಕ್ಷ ವಕೀಲ ಎಚ್. ರಾಜೇಶ್ ತಿಳಿಸಿದ್ದಾರೆ. ಕಾರ್ಯದರ್ಶಿ ವಿಜಯಲಕ್ಷ್ಮೀ ಹಾಗೂ ಶಿಕ್ಷಕ ವರ್ಗದವರು ಇದ್ದರು.