ಸುದ್ದಿಮೂಡಿಗೆರೆ : ಬೆಂಬಿಡದೆ ಕಾಡುತ್ತಿರುವ ಕಾಡಾನೆ ಹಾವಳಿಯಿಂದಾಗಿ ಬುಧವಾರ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮದ ಬಳಿ ಮತ್ತೋಬ್ಬ ಬಲಿಯಾಗಿದ್ದು, ಮಲೆನಾಡಿಗರ ನಿದ್ದೆಗೆಡೆಸುವಂತಾಗಿದೆ.
ಆನೆ ನಿಗ್ರಹ ಪಡೆಯ ಸದಸ್ಯನೇ ಆನೆ ದಾಳಿಗೆ ಸಾವೀಗೀಡಾಗಿರುದು ದುರಂತ ಸಂಗತಿ. ಕಾರ್ತಿಕ್ ಗೌಡ (26) ಮೃತ ದುರ್ದೈವಿಯಾಗಿದ್ದು, ಇಬ್ಬರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕಾರ್ತಿಕ್ ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ವಾಸಿಯಾಗಿದ್ದು, ಸರಕಾರ ರಚಿತವಾದ ಆನೆ ನಿಗ್ರಹ ಪಡೆಯಲ್ಲಿ ಕಳೆದ 1 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದನು ಎನ್ನಲಾಗಿದೆ. ಕಾರ್ತಿಕ್ ಕಾಡಾನೆಯನ್ನು ಕಾಡಿಗಟ್ಟುವಾಗ ಆನೆ ದಾಳಿಗೆ ಸಿಲುಕಿದ್ದು, ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 20 ದಿನದ ಹಿಂದೆ ಆಲ್ದೂರಿನಲ್ಲಿ ವೀಣಾ ಎಂಬುವವರು ಆನೆಧಾಳಿಗೆ ಸಿಲುಕಿ ಸಾವನ್ನಪ್ಪಿದ್ದು. ಇಂದು ಸಂಜೆ ಮೂಡಿಗೆರೆಯ ಬೈರಾಪುರದಲ್ಲಿ ಕಾರ್ತಿಕ್ ಸಾವೀಗೀಡಾಗಿರುವುದು ದುರಂತ ಸಂಗತಿಯಾಗಿದೆ.