ಸುದ್ದಿ ಬೀರೂರು: ತರೀಕೆರೆಯಿಂದಾ ಕೆಲಸ ಮುಗಿಸಿ ವಾಪಾಸು ಬೀರೂರಿಗೆ ಬರುವಾಗ ಸ್ಕೂಟಿಗೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತ ಪಟ್ಟ ಘಟನೆ ಬೀರೂರು ಸಮೀಪದಲ್ಲಿ ಗುರುವಾರ ರಾತ್ರಿ ನಡೆದಿದೆ.
ಬೀರೂರು ಪಟ್ಟಣದ ಹಾಲಪ್ಪ ಬಡಾವಣೆಯ 4 ನೇ ಕ್ರಾಸ್ ನಿವಾಸಿ ಬಿ.ಎಂ.ವಿನಾಯಕ (28) ಮೃತ ದುರ್ದೈವಿ.
ಘಟನೆ ವಿವರ: ಬಿ.ಎಂ.ವಿನಾಯಕ ತರೀಕೆರೆಯ ಶುಭಂ ಎಲೆಕ್ಟ್ರಿಕಲ್ಸ್ ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು. ಎಂದಿನಂತೆ ಪ್ರತಿದಿನ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ. ನ.23ರ ಗುರುವಾರ ಶೋ ರೂಂ ನಲ್ಲಿ ಕೆಲಸ ಮುಗಿಸಿ , ರಾತ್ರಿ 10ಗಂಟೆಗೆ ಊರಿಗೆ ತೆರಳಲು ಬಸ್ಸ್ ಇಲ್ಲದ ಪರಿಣಾಮ ಸ್ನೇಹಿತ ತಿಪ್ಪೇಸ್ವಾಮಿ ಯವರ ಸ್ಕೂಟಿ ಪಡೆದು ಬೀರೂರಿಗೆ ಹೊರಟಿದ್ದಾನೆ. ಈ ಸಂದರ್ಭದಲ್ಲಿ ಕೋಡಿ ಕ್ಯಾಂಪಿನ ಬಳಿ ಬಂದಾಗ ಸುಪ್ರಿಯಾ ಎನ್ನುವ ಯುವತಿ ಬೀರೂರು ರೈಲ್ವೆ ಜಂಕ್ಷನ್ ಗೆ ತೆರಳಲು ಡ್ರಾಪ್ ಕೇಳಿದಾಗ ವಿನಾಯಕ ಒಪ್ಪಿ ಕೂರಿಸಿಕೊಂಡು ಬರುವಾಗ ದೊಡ್ಡಘಟ್ಟಗೇಟ್ ಸಮೀಪ ಬರುವಾಗ ಬೀರೂರಿನಿಂದ ಶಿವಮೊಗ್ಗಕ್ಕೆ ಪ್ರಿಡ್ಜ್ ಸರಕನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಎದುರಿನಿಂದ ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಪೊಲೀಸರಿಗೆ ತಿಳಿಸಿದಾಗ ಪೊಲೀಸರು ವಿನಾಯಕ ಮತ್ತು ಜೊತೆಗಿದ್ದ ಹುಡುಗಿಯನ್ನು ಬೀರೂರಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಘಾತವಾದ ಇಬ್ಬರನ್ನು ವೈದ್ಯರು ಚಿಕಿತ್ಸೆ ನೀಡಿದ್ದರು ವಿನಾಯಕನಿಗೆ ತಲೆ ಹಾಗೂ ಮತ್ತಿತರ ಕಡೆ ಬಲವಾದ ಏಟು ಬಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾನವೀಯತೆ ಮೆರೆದ ಪೊಲೀಸರು:
ದೊಡ್ಡಘಟ್ಟ ಗೇಟ್ ಸಮೀಪದ ಬಳಿ ನಡೆದ ಭೀಕರ ಅಪಘಾತದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪರಾಧ ವಿಭಾಗದ ಪಿ.ಎಸೈ. ಮಂಜುಳಬಾಯಿ ಸ್ಥಳಕ್ಕೆ ತೆರಳಿದಾಗ ಮೃತ ವಿನಾಯಕ ಉಸಿರಾಡುತ್ತಿದ್ದುದನ್ನು ಕಂಡು ತಕ್ಷಣ ತಾವು ಬಂದಿದ್ದ 112 ವಾಹನದಲ್ಲಿ ಅಪಘಾತವಾದವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಏನಾದರು ಮಾಡಿ ಉಳಿಸಿ ಎಂದು ವೈದ್ಯರಿಗೆ ತಿಳಿಸಿದಾಗ ವಿನಾಯಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆ, ಯುವತಿ ಸುಪ್ರಿಯಾಗೆ ಒಳ ಹೊಡೆತ ಬಿದ್ದಿದ್ದರು ಸಹ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿದ್ದು. ವಿಷಯ ಪಟ್ಟಣಾದಾದ್ಯಂತ ಹಬ್ಬುತ್ತಿದಂತೆ ಸಾರ್ವಜನಿಕರು ಪೊಲೀಸರ ಕಾರ್ಯವೈಖರಿಗೆ ಪ್ರಶಂಸಿದ್ದಾರೆ.