ಸುದ್ದಿ ಕಡೂರು : ಶಿವಮೊಗ್ಗದಲ್ಲಿ ನಡೆದ ನ್ಯಾಷನಲ್ ಕರಾಟೆ ಛಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಕಡೂರಿನ ಪ್ರಜ್ಞಾ ಸೆಂಟ್ರಲ್ ಶಾಲೆಯ ಮೂವರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಶಿವಮೊಗ್ಗದ ಎ.ಜೆ. ಮಾರ್ಟಿಯಲ್ ಅಕಾಡೆಮೆ ವತಿಯಿಂದ ನೆಹರೂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮಹಾತ್ಮ ಗಾಂಧಿ ಮೆಮೊರಿಯಲ್ ನ್ಯಾಷನಲ್ ಲೆವೆಲ್ ಒಪನ್ ಕರಾಟೆ ಛಾಂಪಿಯನ್ಶಿಪ್ -2023ರ ಸ್ಪರ್ಧೆಯಲ್ಲಿ ಕಡೂರಿನ ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳಾದ
ಬಿ.ಜೆ. ಪಾರ್ಥಾ(ಪ್ರಥಮ),
ಬಿ.ಜೆ. ಪ್ರಣವ್(ಪ್ರಥಮ)
ಹಾಗೂ ಎಸ್. ಸುಬೊದ್(ತೃತೀಯಾ)
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದು, ಮಕ್ಕಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿದೆ ಎಂದು ಪ್ರಜ್ಞಾ ಶಾಲೆಯ ಕಾರ್ಯದರ್ಶಿ ಎನ್.ಪಿ. ಮಂಜುನಾಥಪ್ರಸನ್ನ ತಿಳಿಸಿದ್ದಾರೆ.