ಚಿಕ್ಕಪಟ್ಟಣಗೆರೆ ಗೇಟ್ ಬಳಿ ಭೀಕರ ಅಪಘಾತ: ಬೈಕ್ ಸವಾರರು ಸಾವು

ಸುದ್ದಿ ಕಡೂರು : ತಾಲ್ಲೂಕಿನ ಚಿಕ್ಕಪಟ್ಟಣಗೆರೆ ಗೇಟ್ ಬಳಿ ಬೈಕ್ ಮತ್ತು ಕಾರು ನಡುವಿನ ಮುಖಾಮುಖಿಯ ಭೀಕರ ಅಪಘಾತದಲ್ಲಿ ಭೈಕಿನ ಇಬ್ಬರು ಯುವಕರು ಮಂಗಳವಾರ ಮೃತಪಟ್ಟಿದ್ದಾರೆ. ಭೀಕರ ಅಪಘಾತದಲ್ಲಿ ಸ್ಥಳದಿಂದ ಕಾರಿನ ಚಾಲಕ ನಾಪತ್ತೆಯಾಗಿದ್ದು, ಕಾರಿನಲ್ಲಿದ್ದ ವ್ಯಕ್ತಿಯೋರ್ವನಿಗೆ ಗಂಭೀರ ಗಾಯಗೊಂಡು ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ. ಬೈಕಿನ ಸವಾರರಾದ ಮಂಡ್ಯ ಜಿಲ್ಲೆಯ ಪಾಂಡಾವಪುರದ ನಯನ್(26), ಚಿಕ್ಕಮಗಳೂರಿನ ಮನು(27)ಮೃತ ದುರ್ದೈವಿಗಳು, ಕಾರಿನಲ್ಲಿದ್ದ ಪ್ರೀತಂ ಎಂಬಾತ ಯುವಕ ಶಿವಮೊಗ್ಗದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ. ಕಡೂರು ಮಾರ್ಗದಿಂದ ಚಿಕ್ಕಮಗಳೂರು ಕಡೆಗೆ ಬೈಕಿನ ಸವಾರರು ಹೋಗುತ್ತಿರುವಾಗ ಕಾರಿನ ಢಿಕ್ಕಿಯಿಂದ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಕಡೂರು ಪಿಎಸ್ಐ ಧನಂಜಯ್ ಭೇಟಿ ನೀಡಿದ್ದರು‌

Leave a Reply

Your email address will not be published. Required fields are marked *

error: Content is protected !!