ತೋಟದ ಹೊಂಡಕ್ಕೆ ಕಾಲುಜಾರಿ ಬಿದ್ದ ಬಾಲಕನ ಧಾರುಣ ಸಾವು

ಸುದ್ದಿ ಬೀರೂರು : ತೋಟದಲ್ಲಿ ತೆಂಗಿನ ಗರಿ ತರಲು ಹೋಗಿದ್ದ ಬಾಲಕನೋರ್ವ ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿದ ಘಟನೆ ಬೀರೂರು ಸಮೀಪದ ಮುಂಡ್ರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮುಂಡ್ರೆಕೊಪ್ಪಲು ಗ್ರಾಮದ ಎಂ.ಎ. ತರುಣ್‌(15) ಮೃತ ದುರ್ದೈವಿಯಾಗಿದ್ದು,  ಮಧ್ಯಾಹ್ನ ಸಮಯದಲ್ಲಿ ಊರಿನ ಸಮೀಪದ ರವಿ ಎಂಬುವವರ ತೋಟಕ್ಕೆ ತನ್ನ ಅತ್ತೆಯ ಮಗನೊಂದಿಗೆ ತೆಂಗಿನಗರಿ ತರಲು ತೋಟಕ್ಕೆ ಹೋಗುವ ಸಂದರ್ಭದಲ್ಲಿ ತೋಟದಲ್ಲಿದ್ದ ನೀರಿನ ಗುಂಡಿಯನ್ನು ಗಮನಿಸಿದೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ. ಬೀರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!