ಸುದ್ದಿ ಕಡೂರು : ನಿಯಮ ಉಲ್ಲಂಘಿಸಿ ಬಾಣಾವಾರದಿಂದ ದೇವನೂರು ಗ್ರಾಮದಲ್ಲಿರುವ ಬ್ಯಾಂಕ್ ಆಫ್ ಬರೋಡೊ ಬ್ಯಾಂಕ್ ಶಾಖೆಗೆ 45ಲಕ್ಷ ನಗದು ಹಣವನ್ನು ಬುಧವಾರ ಸಂಜೆ ಯಾವುದೇ ಪೂರಕ ದಾಖಲೆ ಇಲ್ಲದೆ
ಸಾಗಿಸುತ್ತಿದ್ದ ಸಂದರ್ಭದಲ್ಲಿ ದೇವನೂರು ಬಳಿಯ ಮಾಚಗೊಂಡನಹಳ್ಳಿ ಚೆಕ್ ಪೋಸ್ಟ್ ಬಳಿ ಎಸ್ ಎಸ್ ಟಿ ಅಧಿಕಾರಿಗಳ ತಂಡ ತಪಾಸಣೆ ನಡೆಸುವ ವೇಳೆ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಖರಾಯಪಟ್ಟಣ ಪಿಎಸೈ ಕಿರಣ್, ಆನಂದಪ್ಪ, ಶ್ರೀಧರ್, ಕಾರ್ತಿಕ್ ಮತ್ತಿತರಿದ್ದರು.