ಕಡೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆಯಲ್ಲಿ ಗುರುಶಿಷ್ಯರ ಸಮಾಗಮ! : ಅಲ್ಲಿ ಆಗಿದ್ದೇನು?

ಸುದ್ದಿ ಕಡೂರು : ತಾಲ್ಲೂಕಿನ ಮಚ್ಚೇರಿ ಸಮೀಪದ ಬೆಂಕಿಲಕ್ಷö್ಮಯ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಮನ್ವಯ ಸಭೆಯಲ್ಲಿ ಕಡೂರು ಕ್ಷೇತ್ರದ ಮಟ್ಟಿಗೆ ರಾಜಕೀಯ ಗುರುಶಿಷ್ಯರ ಸಮಾಗಮಾಕ್ಕೆ ವೇದಿಕೆಯೊಂದು ಸಾಕ್ಷಿಯಾಯಿತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಚುನಾವಣಾ ಕಣದಲ್ಲಿ ಜಿದ್ದಾ ಜಿದ್ದಿಯ ಹೋರಾಟ ನಡೆಸಿದ್ದ ಮಾಜಿ ಶಾಸಕರಾದ ವೈ.ಎಸ್.ವಿ ದತ್ತ ಮತ್ತು ಬೆಳ್ಳಿಪ್ರಕಾಶ್ ದೇಶದ ಚುನಾವಣೆಯ ಕದನಕ್ಕಾಗಿ ಸಮನ್ವಯ ವೇದಿಕೆಯಲ್ಲಿ ಇಬ್ಬರೂ ಮೊದಲ ಬಾರಿ ವೇದಿಕೆ ಹಂಚಿಕೊ0ಡರು.
ಕೋಮುವಾದಿ ಪಕ್ಷ ಎಂದೇ ಸದಾ ಹೇಳುತ್ತಿದ್ದ ದತ್ತ ಬೆಳ್ಳಿಪ್ರಕಾಶ್ ಜೊತೆಗೂಡಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಶಾಲು ಧರಿಸಿ ಇಬ್ಬರು ನಾಯಕರು ಸಭೆಯ ಗಮನಸೆಳೆದರು. ಸಭೆಯ ಮಾತಿನ ಮಧ್ಯೆ ದತ್ತ ಅವರು ಬೆಳ್ಳಿ ನನ್ನ ಶಿಷ್ಯ. ಆತನ ನೇತೃತ್ವದಲ್ಲೇ ನಾವುಗಳೆಲ್ಲರೂ ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಕರೆ ನೀಡಿದರು. ಬೆಳ್ಳಿಪ್ರಕಾಶ್ ಸಹ ನನ್ನ ಗುರುಗಳಾದ ದತ್ತ ಎಂದು ಭಾಷಣದಲ್ಲಿ ಸಂಬೋಧಿಸಿ ಒಗ್ಗಟ್ಟಿನೊಂದಿಗೆ ಲೋಕಸಭಾ ಚುನಾವಣಾ ರಣಕಹಳೆಗೆ ಮುನ್ನುಡಿ ಬರೆದರು.

Leave a Reply

Your email address will not be published. Required fields are marked *

error: Content is protected !!